‘ಕೆಲವು ವಿದ್ಯಾರ್ಥಿಗಳು ಘೋಷಣೆ ಕೂಗಿದ ಮಾತ್ರಕ್ಕೆ ದೇಶದ್ರೋಹವಾಗುತ್ತದೆಯೇ’ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಕೇಳುತ್ತಾರೆಂದರೆ ಏನರ್ಥ? ಸಂಸತ್ ಭವನದ ಮೇಲೇ ಅಫ್ಜಲ್ ಭಯೋತ್ಪಾದನಾ ದಾಳಿಯ ಸಂಚು ರೂಪಿಸಿದನಲ್ಲ, ನಮ್ಮ ಯೋಧರು ಪ್ರಾಣಪಣಕ್ಕಿಟ್ಟು ಕಾದಾಡದಿದ್ದರೆ ಸಿಂಧಿಯಾರಂಥವರು ಸಂಸತ್ತಿನಲ್ಲಿ ನೆಮ್ಮದಿಯಿಂದ ಕೂತಿರಲು ಸಾಧ್ಯವಾಗುತ್ತಿತ್ತೇ? ಇದು ನಿಜಕ್ಕೂ ಕಾಂಗ್ರೆಸ್ಸಿಗರು ಆಲೋಚಿಸಬೇಕಾದ ಸಂಗತಿ. ಇತ್ತೀಚೆಗಿನ ಒಂದೆರಡು ಪ್ರಸಂಗಗಳನ್ನು ನಿಮ್ಮ ಮುಂದಿಡುತ್ತೇನೆ. ಆ ನಂತರ ನೀವೇ ತೀರ್ವನಿಸಿ, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಏನು ಮಾಡಬಹುದು ಅಂತ. ಕಳೆದ ವರ್ಷ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು […]