ಆರ್ಥಿಕ ಸುಧಾರಣೆಯ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ಆರಂಭವಾಗಿವೆ. ಸಾಮಾನ್ಯ ಜನರು ಕೂಡ ದೇಶದ ವಿತ್ತೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸುವ ವಾತಾವರಣ ಸೃಷ್ಟಿಯಾಗಿದೆ. ಸಾಮಾಜಿಕ ಯೋಜನೆಗಳು ವೇಗ ಪಡೆದುಕೊಂಡಿದ್ದು, ಅಭಿವೃದ್ಧಿ ಕುರಿತಾದ ಚರ್ಚೆ ಗರಿಗೆದರಿದ್ದು, ಜನರ ಮನೋಧರ್ಮದಲ್ಲಿ ಬದಲಾವಣೆ ಕಾಣುತ್ತಿದೆ. ದೇಶದ ಆರ್ಥಿಕತೆ ವಿಷಯ ಬಂದಾಗ ನಮಗೆ ಎರಡು ವಿಚಾರಗಳು ಇದೀಗ ಪ್ರಮುಖವಾಗಿ ಕಾಣಿಸುತ್ತಿವೆ. ಒಂದು- ಬೇಸರ. ಇನ್ನೊಂದು-ಖುಷಿ. ಮೊದಲು ಬೇಸರದ ವಿಚಾರ ಏನು ಅಂತ ನೋಡೋಣ. 1) ಉದ್ಯೋಗ ಸೃಷ್ಟಿಯಲ್ಲಿ ಭಾರಿ ಇಳಿಕೆ ಆಗಿದೆ. 2) […]
Read More
ಕೆಲವು ಎನ್ಜಿಒಗಳು ಭಾರತದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲೆಂದೇ ಕಾರ್ಯನಿರ್ವಹಿಸುತ್ತಿವೆ. ಈ ಘನಂದಾರಿ ಕೆಲಸಕ್ಕಾಗಿ ಅವಕ್ಕೆ ಅಪಾರ ಪ್ರಮಾಣದ ಧನ ಸಹಾಯವೂ ಬರುತ್ತದೆ. ಈ ಹುನ್ನಾರವನ್ನು ಅರಿಯದೆ ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಕ್ಕೆ ಏನೆನ್ನಬೇಕೋ ತಿಳಿಯದು. ರಾಹುಲ್ ಗಾಂಧಿ ಕೊನೆಗೂ ಕಾಂಗ್ರೆಸ್ ಗಾಡಿಯ ನೊಗಕ್ಕೆ ಹೆಗಲು ಕೊಡಲು ಮನಸ್ಸು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ದೇಶದ ಪ್ರಧಾನಮಂತ್ರಿಯೂ ಆಗುತ್ತೇನೆಂದು ಹೇಳುವ ಧೈರ್ಯ ತೋರಿದ್ದಾರೆ. ಅದು ಒಳ್ಳೆಯದೇ ಅಂತಿಟ್ಟುಕೊಳ್ಳೋಣ. ಈ ಘೊಷಣೆಯಿಂದ ಯಾರಿಗೆ ಎಷ್ಟು ಸಮಾಧಾನ, ಖುಷಿಯಾಗಿದೆಯೋ […]
Read More
ತನ್ನ ಸಾಮ್ರಾಜ್ಯವಾದ ವಿಸ್ತರಣೆಗೆ ಭಾರತವೇ ದೊಡ್ಡ ಅಡ್ಡಿ ಎಂಬುದು ಚೀನಾದ ಅಸಮಾಧಾನ. ಹೀಗಾಗಿ ಲಭ್ಯ ವೇದಿಕೆಗಳನ್ನೆಲ್ಲ ಬಳಸಿಕೊಂಡು ಭಾರತಕ್ಕೆ ತಲೆನೋವು ತರುವುದು ಅದರ ಕಾರ್ಯತಂತ್ರ. ಆದರೆ ಭಾರತ ಬದಲಾಗಿದೆ ಎಂಬ ಸ್ಪಷ್ಟ ಸಂದೇಶ ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ ರವಾನೆಯಾಗಿದೆ. ಇನ್ನೇನು ಭಾರತದ ಮೇಲೆ ಚೀನಾ ಯುದ್ಧ ನಡೆಸಿಯೇಬಿಟ್ಟಿತು ಎಂಬ ಸ್ಥಿತಿ ನಿರ್ಮಾಣ ಆದಾಗಲೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ಮುರಿಯಲಿಲ್ಲ? ಚೀನಾದ ಸತತ ತರ್ಲೆಗಳಿಗೆ ಬಹಿರಂಗ ಉತ್ತರ ಕೊಡುವುದಕ್ಕೆ ಅವರೇಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳಿಗೆ ಈಗ […]
Read More
ಸರಿ-ತಪ್ಪುಗಳು ಕಾಲ ಬದಲಾದಂತೆ ಬದಲಾಗುವುದಿಲ್ಲ. ನ್ಯಾಯ-ಅನ್ಯಾಯಗಳು ಕೂಡ ಅದೇ ರೀತಿ. ಜೀವನದ ಮೌಲ್ಯಗಳೂ ಅಷ್ಟೇ. ಹಾಗೇನೆ ತಾನು ಏಟು ತಿಂದಾಗ ನೋವಾಯಿತು ಎಂದು ಅಳುವವರು ತಾವು ಬೇರೆಯವರಿಗೆ ಏಟು ಕೊಟ್ಟಾಗಲೂ ಅದೇ ರೀತಿ ನೋವಾಗುತ್ತದೆ ಎಂದು ತಿಳಿದುಕೊಳ್ಳಬೇಕಲ್ಲವೇ? ಅಹಮದ್ ಪಟೇಲ್ ವಿಚಾರಕ್ಕೆ ಆಮೇಲೆ ಬರೋಣ. ಅದಕ್ಕಿಂತ ಮೊದಲು ಇಬ್ಬರು ವ್ಯಕ್ತಿಗಳ ಜಾತಕವನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಒಬ್ಬಾಕೆ ಇಷ್ರತ್ ಜಹಾನ್. ಮತ್ತೊಬ್ಬಾತ ಸೊಹ್ರಾಬುದ್ದೀನ್ ಶೇಖ್. ಈ ಇಬ್ಬರೂ ಗುಜರಾತ್ ಮತ್ತು ರಾಜಸ್ಥಾನ ಪೊಲೀಸರ ಗುಂಡಿಗೆ ಸಾವನ್ನಪ್ಪಿದವರು. ಇವರ […]
Read More
ಇವರ ಜಾತ್ಯತೀತವಾದದ ಹಣೆಬರಹವೇ ಇಷ್ಟು ಅನ್ನುವ ತೀರ್ಮಾನಕ್ಕೆ ಬರದೇ ವಿಧಿಯಿಲ್ಲ. ಬೇರೆಲ್ಲ ಬಿಟ್ಟು ಈಗ ಶುರು ಆಗಿದೆ ಲಿಂಗಾಯತ ಧರ್ಮ ಸ್ಥಾಪನೆಯ ಚರ್ಚೆ. ಇದಕ್ಕೆ ಕಾರಣ ಮುಂಬರುವ ವಿಧಾನಸಭೆ ಚುನಾವಣೆ ಮೇಲಿನ ದೃಷ್ಟಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಮಾತು ಚೆನ್ನಾಗಿ ಅರ್ಥ ಆಗಬೇಕೆಂದರೆ, ಲಿಂಗಾಯತ ಧರ್ಮ ಸ್ಥಾಪನೆಯ ವಿಚಾರಕ್ಕಿಂತ ಮೊದಲು ಬಾಕಿ ಇನ್ನೊಂದಿಷ್ಟು ಸಂಗತಿಗಳತ್ತ ಮೆಲುಕು ಹಾಕಬೇಕು. 1985ರ ಸಂದರ್ಭ. ಆಗ ರಾಜೀವ ಗಾಂಧಿ ಈ ದೇಶದ ಪ್ರಧಾನಿ ಆಗಿದ್ದರು. ಪಶ್ಚಿಮ ಬಂಗಾಳದಲ್ಲಿ […]
Read More
ಕರ್ನಾಟಕ ಮತ್ತೊಂದು ಕೇರಳ ಆಗುತ್ತಿದೆಯೇ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಚಾಲ್ತಿಗೆ ಬಂದಿದೆ, ಚರ್ಚೆಗೆ ತಿರುಗಿದೆ. ಕೇರಳ ಅಂದರೆ ಮೊದಲು ನೆನಪಾಗುತ್ತಿದ್ದುದು ಧಾರ್ವಿುಕತೆ, ಅಧ್ಯಾತ್ಮ, ಕಲೆ, ಸಂಗೀತ, ನೃತ್ಯ, ಕಲಾತ್ಮಕ ದೇವಾಲಯಗಳ ವೈಭವದ ಪರಂಪರೆ ಇತ್ಯಾದಿ. ಆ ದೃಷ್ಟಿಯಲ್ಲಿ ನೋಡಿದರೆ ಕೇರಳ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ, ಅದರಾಚೆಗಿನ ಪ್ರಪಂಚಕ್ಕೆಲ್ಲ ಮಾದರಿಯೆಂದರೂ ಅತಿಶಯೋಕ್ತಿಯಲ್ಲ. ಅಂತಹ ಕೇರಳದ ಮಾದರಿ ದೂರದ ಇಸ್ರೇಲ್ವರೆಗೂ ಹಬ್ಬಿರುವುದನ್ನು ನಾವು ಕೇಳಿದ್ದೇವೆ, ಪ್ರತ್ಯಕ್ಷ ನೋಡಿದ್ದೇವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ಗೆ ಭೇಟಿ […]
Read More
ವ್ಯವಸ್ಥೆ ಹಾಳಾಗಿದೆ, ಭ್ರಷ್ಟಾಚಾರ ಮಿತಿಮೀರಿದೆ ಎಂದು ಎಲ್ಲರಿಗೂ ಗೊತ್ತು. ಈ ಬಗ್ಗೆ ಕಿವಿತಮಟೆ ಹರಿದುಹೋಗುವಷ್ಟು ಮಾತುಗಳನ್ನು ಕೇಳಿದ್ದೇವೆ. ಆದರೆ ಎಲ್ಲೋ ಒಂದು ಕಡೆ ಶುದ್ಧೀಕರಣ ಪ್ರಕ್ರಿಯೆ ಆರಂಭವಾಗಲೇಬೇಕಲ್ಲವೆ? ಈಚಿನ ಕೆಲ ನಿದರ್ಶನಗಳನ್ನು ನೋಡಿದರೆ ಆ ಕೆಲಸಕ್ಕೆ ಚಾಲನೆ ದೊರಕಿದಂತಿದೆ. ಆದರೆ ಇದಕ್ಕೂ ಅಪಸ್ವರವೆತ್ತುವವರ ಅಸಲಿಯತ್ತಾದರೂ ಏನು? ಸುಖೀ ಜೀವನದ ಸೂತ್ರ ತಿಳಿದ ಮಹಾನುಭಾವರ ಹಿತವಚನ ಏನೆಂಬುದನ್ನು ನಾವು ಒಮ್ಮೆ ಮೆಲುಕು ಹಾಕುವುದು ಉಚಿತ. ಭಗವದ್ಗೀತೆಯನ್ನು ಉಪದೇಶಿಸಿದ ಶ್ರೀ ಕೃಷ್ಣ ಪರಮಾತ್ಮನಿಂದ ಹಿಡಿದು ಅಸಂಖ್ಯಾತ ಸಾಧು-ಸಂತರು, ದಾಸರು, ಶರಣರವರೆಗೆ, […]
Read More
ಬದಲಾದ ಕಾಲಘಟ್ಟದಲ್ಲಿ ಜನರ ನಿರೀಕ್ಷೆಗಳು, ಆದ್ಯತೆಗಳು ಬದಲಾಗಿವೆ. ಸರ್ಕಾರದ ಉನ್ನತ ಅಧಿಕಾರಸ್ಥಾನಗಳು ಪ್ರತಿಷ್ಠೆ, ದೌಲತ್ತಿನ ಪ್ರದರ್ಶನದ ಸಾಧನಗಳು ಎಂಬ ಭಾವನೆಗೆ ಈಗ ಮನ್ನಣೆಯಿಲ್ಲ. ಸೇವೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡಲ್ಲಿ ಜನರ ಮನಸ್ಸಿನಲ್ಲಿ ನೆಲೆಯಾಗಬಹುದು. ಕರ್ನಾಟಕದ ಅಧಿಕಾರಿಗಳು ಈ ದಾರಿಯಲ್ಲಿ ಸಾಗಲಿ. ಅಚ್ಚ ಕನ್ನಡತಿ ಕೋಲಾರದ ನಂದಿನಿ ಯುಪಿಎಸ್ಸಿ ಟಾಪರ್ ಆಗಿ ಹೊರ ಹೊಮ್ಮಿದ್ದು ಆಕೆಯ ತಂದೆ-ತಾಯಿಗೆ, ಕುಟುಂಬದವರಿಗೆ ಮಾತ್ರವಲ್ಲ ಇಡೀ ಕನ್ನಡ ಕುಲಕೋಟಿ ಹಿರಿಹಿರಿ ಹಿಗ್ಗುವ ವಿಚಾರ. ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿ ಹೇಗಿತ್ತೆಂದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆ […]
Read More