– ಪರೀಕ್ಷೆ ಆಕಾಂಕ್ಷಿಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನ. ವಿಕ ಸುದ್ದಿಲೋಕ ಬೆಂಗಳೂರು. ‘‘ಸತತ ಪ್ರಯತ್ನ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸದಿಂದಾಗಿ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಸೇರಿದಂತೆ ಇತರ ಹುದ್ದೆಗಳ ಭರ್ತಿಗೆ ‘ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)’ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಬಹುದೇ ಹೊರತು, ಬಡತನ, ಕನ್ನಡ ಮಾಧ್ಯಮ, ಗ್ರಾಮೀಣ ಪ್ರದೇಶ ಹಾಗೂ ಇತರೆ ಯಾವುದೇ ಸಮಸ್ಯೆಗಳು ಸಾಧನೆಗೆ ಅಡ್ಡಿ ಬರುವುದಿಲ್ಲ,’’ ಎಂಬುದು ಈ ಬಾರಿ ಯುಪಿಎಸ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುವ ರಾಜ್ಯದ ಅಗ್ರ ಶ್ರೇಯಾಂಕಿತರ […]
Read More
ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್ಸಿ) ಐಎಎಸ್, ಐಪಿಎಸ್ ಮತ್ತು ಇತರ ಅಖಿಲ ಭಾರತ ಸೇವೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ನಡೆಸಿದ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ವಿಶೇಷವೆಂದರೆ ಕರ್ನಾಟಕದಿಂದ ಗಣನೀಯ ಪ್ರಮಾಣದ ಪ್ರತಿಭಾವಂತರು ಅಖಿಲ ಭಾರತ ಆಡಳಿತ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಸಣ್ಣ ಪುಟ್ಟ ಪಟ್ಟಣಗಳು, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವುದು ಹೊಸ ಭರವಸೆ ಮೂಡಿಸಿದೆ. ಯುಪಿಎಸ್ಸಿ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾದ ಒಟ್ಟು 927 ಅಭ್ಯರ್ಥಿಗಳ ಪೈಕಿ ಕರ್ನಾಟಕದ 40 ಪ್ರತಿಭಾನ್ವಿತರಿರುವುದು ವಿಶೇಷ. ಈ ಬೆಳವಣಿಗೆ ಸಾವಿರಾರು […]
Read More
– ಮಂಜುನಾಥ ಅಜ್ಜಂಪುರ. ಬೇಹುಗಾರರ ಬಗೆಗೆ ನಮಗೆ ಒಂದಿಷ್ಟು ರೊಮ್ಯಾಂಟಿಕ್ ಕಲ್ಪನೆಗಳಿವೆ. ಅವನು ಸೀಕ್ರೆಟ್ ಏಜಂಟ್, ಯುವಕ, ಅವನ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರುತ್ತವೆ. ಅರ್ಧಂಬರ್ಧ ಬಟ್ಟೆ ಉಟ್ಟ ಸುಂದರಿಯರು ಅವನನ್ನು ಕಂಡರೆ ಮುಗಿಬೀಳುತ್ತಾರೆ. ಕ್ಷಣಾರ್ಧದಲ್ಲಿ ವೇಷ ಬದಲಾಯಿಸುತ್ತಾನೆ. ಹಾಡಬಲ್ಲ, ಕುಣಿಯಬಲ್ಲ, ರಿಜರ್ವೇಷನ್ ಇಲ್ಲದೆಯೇ ಯಾವುದೇ ವಿಮಾನದಲ್ಲಿ, ಟ್ರೈನಿನಲ್ಲಿ, ಹಡಗಿನಲ್ಲಿಯೂ ಓಡಾಡಬಲ್ಲ. ಒಮ್ಮೆಗೇ ಹತ್ತಾರು ಜನ ಗೂಂಡಾಗಳನ್ನು ಹೊಡೆದುರುಳಿಸಬಲ್ಲ, ಇತ್ಯಾದಿ. ಕಲ್ಪಿತ ಕಥನಗಳಿಗೂ ನಿಜಜೀವನಕ್ಕೂ ಎಷ್ಟು ಅಂತರ ಎಂಬುದನ್ನು ತಿಳಿಯಲು ಈ ಬೇಹುಗಾರರ ಬಗೆಗೆ ಓದಬೇಕು, ತಿಳಿಯಬೇಕು. ಉತ್ತರ […]
Read More
ಬದಲಾದ ಕಾಲಘಟ್ಟದಲ್ಲಿ ಜನರ ನಿರೀಕ್ಷೆಗಳು, ಆದ್ಯತೆಗಳು ಬದಲಾಗಿವೆ. ಸರ್ಕಾರದ ಉನ್ನತ ಅಧಿಕಾರಸ್ಥಾನಗಳು ಪ್ರತಿಷ್ಠೆ, ದೌಲತ್ತಿನ ಪ್ರದರ್ಶನದ ಸಾಧನಗಳು ಎಂಬ ಭಾವನೆಗೆ ಈಗ ಮನ್ನಣೆಯಿಲ್ಲ. ಸೇವೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡಲ್ಲಿ ಜನರ ಮನಸ್ಸಿನಲ್ಲಿ ನೆಲೆಯಾಗಬಹುದು. ಕರ್ನಾಟಕದ ಅಧಿಕಾರಿಗಳು ಈ ದಾರಿಯಲ್ಲಿ ಸಾಗಲಿ. ಅಚ್ಚ ಕನ್ನಡತಿ ಕೋಲಾರದ ನಂದಿನಿ ಯುಪಿಎಸ್ಸಿ ಟಾಪರ್ ಆಗಿ ಹೊರ ಹೊಮ್ಮಿದ್ದು ಆಕೆಯ ತಂದೆ-ತಾಯಿಗೆ, ಕುಟುಂಬದವರಿಗೆ ಮಾತ್ರವಲ್ಲ ಇಡೀ ಕನ್ನಡ ಕುಲಕೋಟಿ ಹಿರಿಹಿರಿ ಹಿಗ್ಗುವ ವಿಚಾರ. ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿ ಹೇಗಿತ್ತೆಂದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆ […]
Read More