ಫ್ರಾನ್ಸ್ನಿಂದ ಹೊರಟಿರುವ ರಫೇಲ್ ಯುದ್ಧವಿಮಾನಗಳು ಯುಎಇನಲ್ಲಿ ಸಿಂಗಲ್ ಸ್ಟಾಪ್ ನೀಡಿ, ಬುಧವಾರ ಭಾರತಕ್ಕೆ ತಲುಪಲಿವೆ. ರಫೇಲ್ ಫೈಟರ್ ಜೆಟ್ಗಳ ಫುಲ್ ಡಿಟೇಲ್ಸ್ ಇಲ್ಲಿದೆ. ಬಹುದಿನಗಳ ಕನಸು ನನಸಾಗುವ ಕ್ಷಣ ಹತ್ತಿರವಾಗಿದೆ. ಭಾರತೀಯ ವಾಯು ಪಡೆಗೆ ‘ಪವನಶಕ್ತಿ’ ನೀಡಲಿರುವ, ಅತ್ಯಾಧುನಿಕ ‘ರಫೇಲ್ ಯುದ್ಧವಿಮಾನ’ಗಳು ಬುಧವಾರ(ಜು.29) ಭಾರತಕ್ಕೆ ಬರಲಿವೆ. ವಿಶೇಷ ಎಂದರೆ, ಈ ರಫೇಲ್ಗಳನ್ನು ಲಡಾಕ್ ಸೆಕ್ಟರ್ನಲ್ಲಿ ನಿಯೋಜನೆ ಮಾಡಲು ಯೋಜಿಸಲಾಗಿದೆ! ಎಲ್ಎಸಿ(ವಾಸ್ತವಿಕ ಗಡಿ ರೇಖೆ)ಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ಇಂಥ ಹೊತ್ತಿನಲ್ಲಿ ರಫೇಲ್ಗಳು […]
Read More
ಕಾರ್ಗಿಲ್ ಗಡಿಯಲ್ಲಿ ಒಳನುಗ್ಗಿ ಟೆಂಟ್ ಹೂಡಿದ ಪಾಕಿ ಅತಿಕ್ರಮಣಕಾರರನ್ನು ಹೊಡೆದೋಡಿಸಿ, ಹಿಮಬೆಟ್ಟಗಳ ಮೇಲೆ ವಿಜಯ ಧ್ವಜ ನೆಟ್ಟ ನೆನಪಿನ ದಿನ ಇಂದು. 1999ರ ಜುಲೈ 25ರ, 21 ವರ್ಷಗಳ ಹಿಂದಿನ, ನಮ್ಮ ಯೋಧರ ಸಾಹಸಗಾಥೆಯನ್ನು ನೆನಪಿಸಿಕೊಳ್ಳಲು ಇದು ಸುಸಮಯ. ಕಡಿದಾದ ಬೆಟ್ಟಗಳ ಮೇಲಿನಿಂದ ದಾಳಿ ನಡೆಸುತ್ತಿದ್ದ ವೈರಿಗಳನ್ನು ಹೊಡೆದುರುಳಿಸಿದ ಪ್ರತಿಯೊಬ್ಬ ಯೋಧನ ಕತೆಯೂ ರೋಮಾಂಚಕವೇ. ಒಳನುಸುಳಿದ ಪಾಕಿಗಳು 1999ರ ಫೆಬ್ರವರಿಯಲ್ಲಿ ಪಾಕ್ನೊಂದಿಗೆ ಶಾಂತಿ ಸಂದೇಶದೊಂದಿಗೆ ಅಂದಿನ ನಮ್ಮ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಲಾಹೋರ್ಗೆ […]
Read More
ಅಮೆರಿಕ ಹಾಗೂ ಚೀನ ದೇಶಗಳ ನಡುವಿನ ವೈಷಮ್ಯ ದಿನೇ ದಿನೆ ಉಲ್ಬಣಿಸುತ್ತಿದೆ. ಉಭಯ ದೇಶಗಳ ವೈಷಮ್ಯಕ್ಕೆ ಕಾರಣವಾದ ಬೆಳವಣಿಗೆಗಳೇನು? ಅವು ಹೇಗೆ ಮುಂದುವರಿದಿವೆ? ರಾಯಭಾರ ಕಚೇರಿಗಳು ಕ್ಲೋಸ್ ಎರಡು ದಿನ ಹಿಂದೆ, ಚೀನಾದ ರಾಯಭಾರ ಕಚೇರಿಯ ಮೂಲಕ ನಮ್ಮ ದೇಶದ ರಹಸ್ಯಗಳನ್ನು ಅಲ್ಲಿಗೆ ಕದ್ದು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಅಮೆರಿಕ, ಹ್ಯೂಸ್ಟನ್ನಲ್ಲಿದ್ದ ಆ ಕಚೇರಿಯನ್ನು ಮುಚ್ಚಿಸಿತು. ಇದಕ್ಕೆ ಪ್ರತಿಯಾಗಿ, ಚೆಂಗ್ಡುವಿನಲ್ಲಿದ್ದ ಅಮೆರಿಕದ ರಾಯಭಾರಿ ಕಚೇರಿಯನ್ನು ಚೀನಾ ಮುಚ್ಚಿಸಿದೆ. ಇದಕ್ಕೂ ಮೊದಲು, ಚೀನಾದ ಇಬ್ಬರು ಪ್ರಜೆಗಳು ತನ್ನ ಮಿಲಿಟರಿ […]
Read More
ಗಡಿಯಲ್ಲಿ ಚೀನಾ ಬೆದರಿಕೆ, ಗಡಿಯೊಳಕ್ಕೆ ಕೊರೊನಾ ವೈರಸ್ ಹಾವಳಿ ಉಂಟು ಮಾಡಿರುವ ನಕಾರಾತ್ಮಕ ಪರಿಣಾಮಗಳ ನಡುವೆಯೇ ಭಾರತದ ಆರ್ಥಿಕತೆಗೆ ಹೊಸ ಹುಮ್ಮಸ್ಸು ತರುವ ಬೆಳವಣಿಗೆ ಕಂಡು ಬಂದಿದೆ. ಜಗತ್ತಿನ ಅತಿದೊಡ್ಡ ಟೆಕ್ ಕಂಪನಿ ಗೂಗಲ್ ಮುಂಬರುವ 5ರಿಂದ 7 ವರ್ಷಗಳಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಘೋಷಣೆ ಮಾಡಿದೆ. ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದವರೇ ಆದ ಗೂಗಲ್ ಸಿಇಒ ಸುಂದರ್ ಪಿಚೈ ಜೊತೆ ನಡೆಸಿದ ಮಾತುಕತೆಯ ಬೆನ್ನೆಲ್ಲೇ ಆ […]
Read More
– ಹರೀಶ್ ಕೇರ. ಎಲ್ಲ ಯುದ್ಧಕಲೆಯೂ ನಿಂತಿರುವುದು ಮೋಸಗೊಳಿಸುವುದು ಹೇಗೆ ಎಂಬುದರ ಮೇಲೆ. ಹೀಗಾಗಿ, ನಾವು ದಾಳಿ ಮಾಡಲು ಸಿದ್ಧರಾಗಿದ್ದಾಗ, ನಾವು ದುರ್ಬಲರಂತೆ ಕಾಣಿಸಬೇಕು. ನಮ್ಮ ಶಕ್ತಿಗಳನ್ನು ಪ್ರಯೋಗಿಸುವಾಗ, ನಾವು ನಿಷ್ಕ್ರಿಯರಂತೆ ಕಾಣಿಸಬೇಕು. ನಾವು ಹತ್ತಿರ ಇರುವಾಗ, ದೂರ ಇದ್ದೇವೆ ಎಂದು ಶತ್ರುವಿಗೆ ಭಾಸವಾಗುವಂತೆ ಇರಬೇಕು; ದೂರವಿದ್ದಾಗ, ನಾವು ಹತ್ತಿರವೇ ಇದ್ದೇವೆ ಎಂದು ಆತ ನಂಬುವಂತಿರಬೇಕು. ಈ ಮಾತುಗಳು ಇರುವುದು ಕ್ರಿಸ್ತಪೂರ್ವ 5ನೇ ಶತಮಾನದ ಸತ್ ತ್ಸು ಎಂಬ ಚೀನೀ ಸೇನಾ ತಂತ್ರಗಾರ ಬರೆದ ‘ಆರ್ಟ್ ಆಫ್ […]
Read More
54 ವರ್ಷದ ವಾಂಗ್ಚುಕ್ ಪ್ರತಿಭೆಯ ಖನಿ, ಹಲವು ಸಾಧನೆಗಳ ಸಾರಥಿ, ಬಾಯ್ಕಾಟ್ ಚೀನಾ ಅಭಿಯಾನಕ್ಕೆ ವೇಗ ನೀಡಿದ ರೂವಾರಿ. – ಮಲ್ಲಿಕಾರ್ಜುನ ತಿಪ್ಪಾರ. ಗಲ್ವಾನ್ ಕಣಿವೆಯಲ್ಲಿ ಚೀನಾ ಅಟ್ಟಹಾಸಕ್ಕೆ ನಮ್ಮ ಯೋಧರು ಹುತಾತ್ಮರಾದರಲ್ಲ ಅದೇ ಕ್ಷ ಣ ದೇಶದಲ್ಲೊಂದು ‘ಬಾಯ್ಕಾಟ್ ಚೀನಾ’ ಆಂದೋಲನ ಇದ್ದಕ್ಕಿಂತ ವೇಗ ಪಡೆದುಕೊಂಡಿತು. ಅದರ ಹಿಂದಿನ ಶಕ್ತಿಯೇ ಈ ಸೋನಮ್ ವಾಂಗ್ಚುಕ್. ‘ಚೀನಾ ಕೋ ಜವಾಬ್’ ಸರಣಿ ವಿಡಿಯೋಗಳನ್ನು ಹರಿಬಿಟ್ಟ ಈ ಲಡಾಖಿ ವ್ಯಕ್ತಿಯ ಹಿನ್ನೆಲೆಯನ್ನು ತಿಳಿದರೆ ವ್ಯಕ್ತಿಯೊಬ್ಬ ಇಷ್ಟೆಲ್ಲ ಕೆಲಸಗಳನ್ನು ಮಾಡಬಹುದೇ, […]
Read More
ಮೋದಿಯವರ ಅಷ್ಟೊಂದು ವಿದೇಶ ಪ್ರವಾಸಗಳ ಪರಿಣಾಮ ಈಗ ತಿಳಿಯತೊಡಗಿದೆ – ರಮೇಶ್ ಕುಮಾರ್ ನಾಯಕ್. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದಾ ವಿದೇಶ ಪ್ರವಾಸದ ಶೋಕಿ. ಬೆನ್ನುಬೆನ್ನಿಗೆ ಫಾರಿನ್ ಟೂರ್ ಮಾಡುವ ಮೂಲಕ ಖಜಾನೆಯ ದುಡ್ಡಿನ ದುಂದು ವೆಚ್ಚ ಮಾಡುತ್ತಿದ್ದಾರೆ. ದೇಶದ ಕೋಟ್ಯಂತರ ಜನ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವಾಗ ಈ ಪ್ರಧಾನಿ ದಿನ ಬೆಳಗಾದರೆ ವಿಶೇಷ ವಿಮಾನ ಏರಿ ದೇಶ ಸುತ್ತುವುದೇಕೆ? ಆಗಾಗ ಅಮೆರಿಕ, ರಷ್ಯಾ, ಜಪಾನ್, ಜರ್ಮನಿ, ಫ್ರಾನ್ಸ್, ಭೂತಾನ್ ಎಂದೆಲ್ಲ ರಾಜತಾಂತ್ರಿಕ ಭೇಟಿ […]
Read More
– ಡ್ರ್ಯಾಗನ್ ದೇಶದ ಕ್ಷುದ್ರತನಕ್ಕೆ ಎದುರೇಟು ನೀಡಲು ಮುಂದಾಗಿದೆ ಅಂತಾರಾಷ್ಟ್ರೀಯ ಸಮುದಾಯ. – ಹರಿಪ್ರಕಾಶ್ ಕೋಣೆಮನೆ. ಇದುವರೆಗೆ ಭಾರತದ ಪಾಲಿಗೆ ಗಡಿಯಲ್ಲಿ ಮತ್ತು ಉಡಿಯಲ್ಲಿ ಕಟ್ಟಿಕೊಂಡ ಕೆಂಡದಂತಿದ್ದ ಚೀನಾ, ಈಗ ಕರಕಲಾದ ಇದ್ದಿಲಿನಂತಾಗಿದೆ ಎಂದರೆ ಉತ್ಪ್ರೇಕ್ಷೆ ಆಗದು. ಅಮೆರಿಕಾಗೆ ಸಡ್ಡು ಹೊಡೆದು ಜಾಗತಿಕ ಪರ್ಯಾಯ ಶಕ್ತಿಯಾಗುವೆ ಎಂದು ಜಗತ್ತಿನ ಎದುರು ಬೀಗುತ್ತಿದ್ದ ಆ ರಾಷ್ಟ್ರ ಸದ್ಯಕ್ಕಂತೂ ಏಕಾಂಗಿಯಾಗಿದೆ. ಸ್ವಾರಸ್ಯ ಎಂದರೆ, ಚೀನಾ ವಿರುದ್ಧವೇ ಜಾಗತಿಕ ಒಕ್ಕೂಟ ರಚನೆಯಾಗುವ ಮುನ್ಸೂಚನೆಗಳು ಕಾಣುತ್ತಿವೆ. ನಿಜವಾಗಿಯೂ ಚೀನಾಗೆ ಜಾಗತಿಕ ಶಕ್ತಿಯಾಗುವ ಅರ್ಹತೆ […]
Read More
ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೋವಿಡ್ ವೈರಸ್ ತಡೆಗಟ್ಟುವ ಲಸಿಕೆ ಪಡೆಯಲು ಎರಡು ಪ್ರಯೋಗಾಲಯ ಪ್ರಯತ್ನಗಳು ಆರಂಭವಾಗಿವೆ. ಈ ಎರಡೂ ಪ್ರಯತ್ನಗಳು ಈಗ ಯಾವ ಹಂತದಲ್ಲಿವೆ? ಭಾರತದಲ್ಲಿ ಈ ಹಿಂದೆಯೂ ಲಸಿಕೆಗಳನ್ನು ಸಿದ್ಧಪಡಿಸಲಾಗಿತ್ತೆ? ಇತ್ಯಾದಿ ವಿವರ ಇಲ್ಲಿವೆ. ಆಗಸ್ಟ್ 15ರ ಒಳಗೆ ಭಾರತದಲ್ಲಿ ಕೋವಿಡ್ಗೆ ಪರಿಣಾಮಕಾರಿ ಲಸಿಕೆ ಸಿದ್ಧವಾಗಲಿದೆ ಎಂಬುದು ಬಿಸಿಬಿಸಿ ಚರ್ಚೆಯ ವಿಷಯ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಅದನ್ನು ಕೆಂಪು ಕೋಟೆಯ ಮೇಲಿನಿಂಧ ಘೋಷಿಸುವಂತೆ ಆಗಬೇಕು ಎಂಬುದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್)ಯ ಕನಸು. […]
Read More
– ತರುಣ್ ವಿಜಯ್. ಭಾರತೀಯ ರಾಜಕಾರಣದಲ್ಲಿ ಸಿಂಹಸದೃಶ ವ್ಯಕ್ತಿತ್ವದವರಾಗಿದ್ದ ಶ್ಯಾಮಪ್ರಸಾದ ಮುಖರ್ಜಿ ಅವರ 119ನೇ ಜನ್ಮದಿನವನ್ನು ಜುಲೈ 6ರಂದು ಆಚರಿಸಿದೆವು. ಅವರು ಬಹಳ ಕಾಲ ಬದುಕಿದ್ದರೆ ಇಂದಿನ ರಾಜಕೀಯದ ಸ್ವರೂಪವೇ ಬೇರೆ ರೀತಿ ಇರುತ್ತಿತ್ತು. ಆಧುನಿಕ ಅಮೆರಿಕದ ರಾಜಕೀಯವನ್ನು ಅಬ್ರಹಾಂ ಲಿಂಕನ್ ಹೇಗೆ ಪ್ರಭಾವಿಸಿದರೋ ಹಾಗೆಯೇ ಶ್ಯಾಮಪ್ರಸಾದ್ ಮುಖರ್ಜಿ ಭಾರತವನ್ನು ಪ್ರಭಾವಿಸಿದರು. ಎರಡೇ ದಶಕಗಳ ಕ್ಲುಪ್ತ ಕಾಲದ ರಾಜಕೀಯ ಜೀವನದಲ್ಲಿ ಅವರು ದೇಶದ ಹಿಂದೂಗಳ ಜೀವನವನ್ನು, ಅವರ ಸುರಕ್ಷತೆಯನ್ನು ಎತ್ತಿ ಹಿಡಿದರು. 1953ರಲ್ಲಿಯೇ ಜಮ್ಮು- ಕಾಶ್ಮೀರ ಭಾರದಲ್ಲಿ […]
Read More