– ಶಶಿಧರ ಹೆಗಡೆ, ಬೆಂಗಳೂರು : ಪ್ರತಿ ವರ್ಷ ಮುಂಗಾರಿನಲ್ಲಿ ರಾಜ್ಯಾದ್ಯಂತ ಕೋಟ್ಯಂತರ ಸಸಿಗಳನ್ನು ನೆಟ್ಟರೂ ಬರಡು ಪ್ರದೇಶದ ಜಿಲ್ಲೆಗಳು ಹಸಿರು ವಲಯದಿಂದ ಬಹಳ ದೂರವೇ ಉಳಿದಿವೆ. ಬ್ರಿಟಿಷ್ ಆಡಳಿತದ ಕಾಲದಿಂದಲೂ ‘ಫಾರೆಸ್ಟ್ ಡಿಸ್ಟ್ರಿಕ್ಟ್’ ಎನಿಸಿಕೊಂಡಿರುವ ಉತ್ತರ ಕನ್ನಡ ಮಾತ್ರ ಈಗಲೂ ರಾಜ್ಯದಲ್ಲಿ ಅತ್ಯಧಿಕ ಅರಣ್ಯ ಹೊಂದಿರುವ ಹಚ್ಚ ಹಸಿರಿನ ಜಿಲ್ಲೆಯೆಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ರಾಜ್ಯದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಬಿಡುಗಡೆ ಮಾಡಿರುವ ವರದಿ ಅನುಸಾರ ಉತ್ತರ ಕನ್ನಡ ಜಿಲ್ಲೆ ಮಾತ್ರ ಹಚ್ಚ ಹಸಿರಿನ ವಲಯದಲ್ಲಿದೆ. […]