ಮುಂದಿನ ದಿನಗಳಲ್ಲಿ ಆರ್ಥಿಕತೆಯ ಉತ್ತೇಜನಕ್ಕೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ. ದೇಶದಲ್ಲಿನ ಕೋವಿಡ್-19 ಪರಿಸ್ಥಿತಿ, ಅನ್ಲಾಕ್ 1.0 ಜಾರಿಯ ಪರಿಣಾಮ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು 15 ರಾಜ್ಯಗಳ ಸಿಎಂಗಳೊಂದಿಗೆ ಬುಧವಾರ ನಡೆಸಿದ ವಿಡಿಯೊ ಕಾನ್ಫರೆನ್ಸ್ನಲ್ಲಿ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಕೋವಿಡ್ ಸಂದರ್ಭ ಬಳಸಿಕೊಂಡು ಆರೋಗ್ಯ ಸೇವೆಗಳ ವಿಸ್ತರಣೆಗೆ ನಾವು ಒತ್ತು ನೀಡಬೇಕೆಂಬ ಆಶಯವನ್ನೂ ಅವರು ಪ್ರತಿಪಾದಿಸಿದ್ದಾರೆ. ಮತ್ತೊಮ್ಮೆ ಲಾಕ್ಡೌನ್ ಮಾಡಲಾಗುವುದಿಲ್ಲ […]
Read More
ಸಾಲ ಮರುಪಾವತಿಯ ಅವಧಿ ಮುಂದೂಡಿಕೆಗೆ ಅವಕಾಶ ನೀಡಿರುವ ಆರ್ಬಿಐ, ಈ ಅವಧಿಯ ಬಡ್ಡಿ ಮನ್ನಾ ಮಾಡದಿರುವುದಕ್ಕೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಲದ ಇಎಂಐ ಕಟ್ಟಲು ಅವಧಿಯನ್ನು ಮಾರ್ಚ್ನಿಂದ ಆಗಸ್ಟ್ವರೆಗೆ, ಆರು ತಿಂಗಳ ಕಾಲ ಮುಂದೂಡಿದೆ. ಆದರೆ ಇದೇ ಅವಧಿಯಲ್ಲಿ ಸಾಲಕ್ಕೆ ಬಡ್ಡಿ ಸಂಗ್ರಹಿಸಲು ಬ್ಯಾಂಕ್ಗಳಿಗೆ ಅವಕಾಶ ನೀಡಿದೆ. ಇದು ಅನಿವಾರ್ಯ ಎಂದು ಕೋರ್ಟ್ಗೆ ನೀಡಿದ ವಿವರಣೆಯಲ್ಲಿ ಆರ್ಬಿಐ ಹೇಳಿದೆ. ಆರ್ಬಿಐ ನೀಡಿರುವ ಈ ಸೌಲಭ್ಯವೇ ಒಂದು ಬಗೆಯಲ್ಲಿ ವಿಚಿತ್ರ. ಇದನ್ನು ಒಂದೇ ಮಾತಿನಲ್ಲಿ […]
Read More
– ಸದ್ಗುರು ಶ್ರೀ ಜಗ್ಗೀ ವಾಸುದೇವ. ಕೊರೊನಾ ವೈರಸ್ ಪರಿಸ್ಥಿತಿಯಿಂದ ಖಚಿತವಾಗಿ ಯಾವಾಗ ಹೊರಬರುತ್ತೇವೆಂದು ಹೇಳಲು ದುರದೃಷ್ಟವಷಾತ್ ನಮಗಿನ್ನೂ ಸಾಧ್ಯವಾಗಿಲ್ಲ. ಕೈಗಾರಿಕೆ ಮತ್ತು ವ್ಯಾಪಾರಗಳ ದೃಷ್ಟಿಯಲ್ಲಿ ನೋಡುವುದಾದರೆ, ಅದು ನಮ್ಮನ್ನು ಒಂದು ಸಂದಿಗ್ಧ ಸ್ಥಿತಿಗೆ ತಲುಪಿಸಿದೆ. ಜನರು, ಸಂಸ್ಥೆಗಳು, ಸಣ್ಣ ಮತ್ತು ದೊಡ್ಡ ವ್ಯಾಪಾರಗಳಿಗೆ ಹೊಡೆತ ಬಿದ್ದಿರುವುದರಲ್ಲಿ ಸಂಶಯವಿಲ್ಲ ಮತ್ತು ಹತ್ತಿರದ ಭವಿಷ್ಯದಲ್ಲಿ, ಅತೀವ ಸಂಕಟಗಳು ಕಾದಿವೆ. ಅನೇಕ ವ್ಯಾಪಾರೋದ್ಯಮಗಳು ಮತ್ತೊಮ್ಮೆ ಮೊದಲಿನಿಂದ ಪ್ರಾರಂಭಿಸಬೇಕು. ಅವು ಹೇಗೆ ಕಾರ್ಯಾಚರಿಸಬೇಕು ಎನ್ನುವುದನ್ನು ಮರುಪರಿಶೀಲಿಸಬೇಕಾಗಿದೆ. ಮೊದಲು ಹೇಗೆ ಕೆಲಸ ಮಾಡುತ್ತಿದ್ದವೋ […]
Read More
– ಸಾಲಗಳ ಇಎಂಐ ಆಗಸ್ಟ್ ತನಕ ಮುಂದೂಡಿಕೆ – ರಿಸರ್ವ್ ಬ್ಯಾಂಕ್ ರೆಪೊ ದರ 4.4%ನಿಂದ 4%ಗೆ ಕಡಿತ – ಗೃಹ, ವಾಹನ, ಕಾರ್ಪೊರೇಟ್ ಸಾಲ ಇಳಿಕೆ ಸಂಭವ – ಸಾಲಗಾರರಿಗೆ ಇಳಿದ ಹೊರೆ, ಠೇವಣಿ ದಾರರಿಗೆ ನಷ್ಟ ಮುಂಬಯಿ: ಕೋವಿಡ್-19 ಬಿಕ್ಕಟ್ಟು ಮತ್ತು ಲಾಕ್ಡೌನ್ ಪರಿಣಾಮ ಸ್ಥಗಿತವಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಅನಿರೀಕ್ಷಿತವಾಗಿ ತನ್ನ ಅಲ್ಪಾವಧಿಯ ಸಾಲದ ಬಡ್ಡಿ ದರವನ್ನು (ರೆಪೊ) ಶೇ.4.4ರಿಂದ ಶೇ.4ಕ್ಕೆ ಕಡಿತಗೊಳಿಸಿದೆ. ಕಳೆದ […]
Read More
ಲಾಕ್ಡೌನ್ ಸುದೀರ್ಘ ಕಾಲಕ್ಕೆ ಮುಂದುವರಿದರೆ, ಕೊರೊನಾ ಸೊಂಕಿನಿಂದ ಸಾಯುವವರಿಗಿಂತಲೂ ಹಸಿವಿನಿಂದ ಸಾಯುವವರ ಸಂಖ್ಯೆಯೇ ಅಧಿಕವಾಗಲಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೋಟ್ಯಂತರ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು, ಸ್ವಯಂ ಉದ್ಯೋಗಿಗಳು ಲಾಕ್ಡೌನ್ನಿಂದಾಗಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡು ಕೂತಿದ್ದಾರೆ ಎಂದಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ನಿಂದ ಸಂಭವಿಸುವ ಸಾವಿನ ದರ 0.25-0.5 ಶೇ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಅತಿ ಕಡಿಮೆ. ಆದರೆ ಭಾರತದಂತಹ ದುಡಿಯುವ ಜನ ಇರುವ […]
Read More
ಒಂದು ಕಡೆ ಹೊರಗೆ ಬಂದರೆ ಕೊರೊನಾ ವೈರಸ್ನ ಭಯ. ಇನ್ನೊಂದು ಮನೆಯೊಳಗೇ ಇದ್ದರೂ ಆನ್ಲೈನ್ನಲ್ಲಿ ವಂಚಕರ ಸುಲಿಗೆಗೆ ತುತ್ತಾಗುವ ಆತಂಕ. ಇದು ಪ್ರಜೆಗಳ ಸದ್ಯದ ಸ್ಥಿತಿ! ಚೀನಾ ಮೂಲದ ‘ಜೂಮ್’ ಎಂಬ ಆ್ಯಪ್ ಅನ್ನು ಬಳಸುವವರು ಅದನ್ನು ಕೈಬಿಡುವುದು ಅಥವಾ ಹುಷಾರಾಗಿರುವುದು ಅಗತ್ಯ ಎಂದು ಕೇಂದ್ರ ಸರಕಾರ ಸೂಚಿಸಿದೆ. ಜೂಮ್ನ ಹಲವು ಭಾರತೀಯ ಬಳಕೆದಾರರ ಪಾಸ್ವರ್ಡ್ಗಳು ಹ್ಯಾಕ್ ಆಗಿರುವುದು ಹಾಗೂ ಕಾನ್ಫರೆನ್ಸ್ ಕರೆಯ ನಡುವೆ ಹ್ಯಾಕ್ ಆಗಿರುವುದು ಕಂಡುಬಂದ ನಂತರ ಸರಕಾರದ ಈ ಸೂಚನೆ ಬಂದಿದೆ. ಜೂಮ್ನ […]
Read More
– ಮುಂದುವರಿದ ಕೊರೊನಾ ಸೋಂಕು, ಸಾವಿನ ಸರಣಿ ಅರ್ಥ ವ್ಯವಸ್ಥೆಗೇ ಆಪತ್ತು – ಉದ್ಯೋಗ ನಷ್ಟ ಇಲ್ಲವೇ ಸಂಬಳ ಕಡಿತ ಸಾಧ್ಯತೆ – ಬಡ ಮತ್ತು ಮಧ್ಯಮ ವರ್ಗದ ಜನರ ಜೀವನ ನಿರ್ವಹಣೆಗೆ ಎದುರಾಗಲಿದೆ ಸವಾಲು – ಕಠಿಣ ಬಜೆಟ್ ಸೂತ್ರವೇ ಸದ್ಯಕ್ಕಿರುವ ದಾರಿ – ಎ ಕೃಷ್ಣ ಭಟ್, ಬೆಂಗಳೂರು ಮಹಾಮಾರಿ ಕೊರೊನಾದ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸಿದೆ. ಕೊರೊನಾ ಕೇವಲ ಆರೋಗ್ಯ ಸಮಸ್ಯೆಯಲ್ಲ. ಅರ್ಥ ವ್ಯವಸ್ಥೆಯನ್ನು ಬುಡಮೇಲುಗೊಳಿಸಿರುವ ಈ ರೋಗ ಸಾಮಾಜಿಕವಾಗಿಯೂ ಹಲವು ಸವಾಲುಗಳನ್ನು […]
Read More