ಸಾಂಕ್ರಾಮಿಕ ಸೃಷ್ಟಿಸಿದ ತಳಮಳ ಯಾತನೆಗಳೇ ಮುಂದಿನ ಸಾಹಿತ್ಯದ ದಾರಿ ದೀವಿಗೆಗಳಾಗಬಹುದು. – ಡಾ. ರೋಹಿಣಾಕ್ಷ ಶಿರ್ಲಾಲು. ಸಾಹಿತ್ಯ ಕಾಲಕಾಲಕ್ಕೆ ಹೊಸ ಮಾರ್ಗವನ್ನು ತನಗೆ ತಾನೇ ಶೋಧಿಸಿಕೊಳ್ಳುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕೊರೊನಾ ಸೋಂಕು ಕೂಡ ಸಾಹಿತ್ಯ ಅಭಿವ್ಯಕ್ತಿಗೆ ಹೊಸದೊಂದು ಮಾರ್ಗವನ್ನು ಕಂಡುಕೊಳ್ಳಲು ಅವಕಾಶವಾಗಬಹುದು. ಸಾಹಿತ್ಯ ಚರಿತ್ರೆಯ ಕಾಲ ವಿಂಗಡನೆಯ ವಿಭಾಗ ಕ್ರಮದೊಳಗೆ ಇನ್ನು ಮುಂದೆ ಕೊರೊನಾ ಪೂರ್ವದ ಸಾಹಿತ್ಯ, ಕೊರೊನೋತ್ತರ ಸಾಹಿತ್ಯ ಎಂಬ ವಿಭಾಗಕ್ರಮಗಳೂ ಸೇರಬಹುದಾಗಿದೆ. ಕೇವಲ ವಿಭಾಗ ಕ್ರಮದ ದೃಷ್ಟಿಯಿಂದ ಮಾತ್ರವಲ್ಲ, ಸಾಹಿತ್ಯ ಕೃತಿಗಳ […]