ಗೋ ಸಂರಕ್ಷಣೆ, ಗೋಹತ್ಯೆ ನಿಷೇಧ- ಇತ್ಯಾದಿ ಹೆಸರುಗಳಿಂದ ಪ್ರಸ್ತಾವಿತವಾಗುವ ವಿಷಯ ಭಾರತದಲ್ಲಿ ಬಹುತೇಕ ಗೊಂದಲದ ಗೂಡಾಗಿದೆ. ಈ ಬಗ್ಗೆ ಒಂದೊಂದು ರಾಜ್ಯ ಒಂದೊಂದು ಕಾನೂನು ಹೊಂದಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಬಿಜೆಪಿ ಸರಕಾರ, ರಾಜ್ಯದಲ್ಲಿದ್ದ ಗೋ ಹತ್ಯೆ ತಡೆ ಕಾಯಿದೆ-1955ನ್ನು ಮತ್ತಷ್ಟು ಬಿಗಿ ಮಾಡಿದೆ. ಅದರ ಪ್ರಕಾರ, ಇನ್ನು ಮುಂದೆ ಗೋ ಹತ್ಯೆ ಮಾಡುವವರಿಗೆ ಗರಿಷ್ಠ 10 ವರ್ಷ ಜೈಲು. ದಂಡದ ಮೊತ್ತ ಹತ್ತು ಸಾವಿರದಿಂದ 5 ಲಕ್ಷದವರೆಗೆ ಏರಿಕೆ. ಗೋ ಹತ್ಯೆಯಿಂದ […]