ಸೆಕ್ಸ್ ಸಿಡಿ ಲೇಡಿ ಅಂತ ಹೇಳಲಾಗಿರುವ ಮಹಿಳೆ ಹೈದರಾಬಾದಲ್ಲಿ ಪತ್ತೆ, ಆಕೆ ನೀಡುವ ಹೇಳಿಕೆ ಈಗ ಕುತೂಹಲದ ಕೇಂದ್ರ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ತಡೆಯಲು ಕಠಿಣಕ್ರಮದ ನಿರೀಕ್ಷೆ
ಸೆಕ್ಸ್ ಸಿಡಿ ಲೇಡಿ ಅಂತ ಹೇಳಲಾಗಿರುವ ಮಹಿಳೆ ಹೈದರಾಬಾದಲ್ಲಿ ಪತ್ತೆ, ಆಕೆ ನೀಡುವ ಹೇಳಿಕೆ ಈಗ ಕುತೂಹಲದ ಕೇಂದ್ರ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ತಡೆಯಲು ಕಠಿಣಕ್ರಮದ ನಿರೀಕ್ಷೆ
ಕೊರೊನಾ ವೈರಸ್ ಚೀನಾದ್ದೇ ಸೃಷ್ಟಿ ಎಂದು ದಿಟ್ಟವಾಗಿ ಹೇಳುತ್ತಿದ್ದಾರೆ ಈ ವೈರಾಲಜಿಸ್ಟ್. – ಕೇಶವಪ್ರಸಾದ್ ಬಿ. ಚೀನಾದ ಕಮ್ಯುನಿಸ್ಟ್ ಪಕ್ಷದ ಉಸ್ತುವಾರಿಯಲ್ಲಿಯೇ, ಮಿಲಿಟರಿ ಪ್ರಯೋಗಾಲಯದಲ್ಲಿ ಕೋವಿಡ್-19 ವೈರಸ್ ಅನ್ನು ಸೃಷ್ಟಿಸಲಾಗಿದೆಯೇ ಹೊರತು, ವುಹಾನ್ನ ಮಾರುಕಟ್ಟೆಯಲ್ಲಿ ಅಲ್ಲ ಎಂದು ಸ್ವತಃ ಚೀನಾದ ಹಾಂಕಾಂಗ್ ಯೂನಿವರ್ಸಿಟಿಯಲ್ಲಿ ವೈರಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಲಿ-ಮೆಂಗ್ ಯಾನ್ ಗಂಭೀರವಾಗಿ ಆರೋಪಿಸಿದ್ದಾರೆ. ಇದರೊಂದಿಗೆ ಅಮೆರಿಕ, ಯುರೋಪ್ ಇತ್ಯಾದಿ ಪಾಶ್ಚಿಮಾತ್ಯ ರಾಷ್ಟ್ರಗಳ ಗುಮಾನಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ. ಚೀನಾದ ಕಮ್ಯುನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ […]
ಚೀನಾದಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ವೈರಸ್ ಈಗಾಗಲೇ 7 ಜನರ ಬಲಿ ಪಡೆದಿದೆ. ಯಾವುದೀ ಹೊಸ ವೈರಸ್? ಚೀನಾ ಏಕೆ ಕೊರೊನಾ ಸೇರಿದಂತೆ ಅನೇಕ ಮಾರಕ ವೈರಾಣುಗಳ ಆಡುಂಬೊಲವಾಗಿದೆ? ಉಣ್ಣಿಯಿಂದ ಹರಡುವ ಜ್ವರ ಕೊರೊನಾವನ್ನು ಹುಟ್ಟಿಸಿ ನಿರ್ಲಕ್ಷ್ಯದಿಂದ ಜಗತ್ತಿನಾದ್ಯಂತ ಹರಿಬಿಟ್ಟು ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಚೀನಾದಲ್ಲಿ ಇನ್ನೊಂದು ಮಾರಕ ವೈರಸ್ ಹರಡಲು ಆರಂಭವಾಗಿದೆ. ಇದರ ಮರಣ ಪ್ರಮಾಣ ಶೇ.30. ಅಂದರೆ ನೂರು ಮಂದಿಗೆ ಸೋಂಕು ತಾಕಿದರೆ ಮೂವತ್ತು ಮಂದಿ ಸಾಯುತ್ತಾರೆ. ವೈರಸ್ಸನ್ನು ಸಿವಿಯರ್ ಫಿವರ್ ವಿದ್ ತ್ರೋಂಬೋಸೈಟೋಪೇನಿಯಾ ಸಿಂಡ್ರೋಮ್ […]
– ಅರುಣ್ ಪದಕಿ. ಕಳೆದ ಹಲವು ದಶಕಗಳಿಂದ ಉತ್ತಮ ಆದಾಯ ಗಳಿಸುವ ಉದ್ಯೋಗಗಳು, ಉದ್ಯಮಗಳು, ಕೃಷಿ ಆದಾಯ, ವೈದ್ಯಕೀಯ ಮತ್ತು ಶಿಕ್ಷಣ ಸೌಲಭ್ಯಗಳ ಕೊರತೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇದು ಹೆಚ್ಚಿನ ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗಲು ಕಾರಣವಾಗಿದೆ. ಏಕೆಂದರೆ ಜೀವನೋಪಾಯಗಳು, ಉದ್ಯೋಗಗಳು ಮತ್ತು ವೃತ್ತಿಜೀವನಗಳು ನಗರದಲ್ಲಿ ಹೆಚ್ಚು ಮತ್ತು ಸುಲಭ. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಅಸಡ್ಡೆ ಇದೆ. ಕೆಲವೆಡೆ ಅಭಿವೃದ್ಧಿ ವೇಗವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಈ ಆಕಾಂಕ್ಷೆಗಳು ಮೆಗಾಸಿಟಿಗಳನ್ನು […]
ಕಾರವಾರದಲ್ಲಿ ವೃದ್ಧರೊಬ್ಬರು ಹೃದಯಾಘಾತದಿಂದ ಆಸ್ಪತ್ರೆಗೆ ತೆರಳಿದಾಗ, ಕೋವಿಡ್ ಟೆಸ್ಟ್ನ ನೆಪ ಒಡ್ಡಿ ಚಿಕಿತ್ಸೆ ನಿರಾಕರಿಸಿದ, ಆಸ್ಪತ್ರೆಗಳಿಗೆ ಅಲೆದಾಡಿದ ಹಾಗೂ ಅವರು ಇದರಿಂದಾಗಿ ಉಂಟಾದ ವಿಳಂಬದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಇಂಥ ಹಲವಾರು ಘಟನೆಗಳು ನಡೆದಿದ್ದವು. ಹೆಚ್ಚಾಗಿ ಖಾಸಗಿ ಅಸ್ಪತ್ರೆಗಳವರು, ಗಂಭೀರ ಆರೋಗ್ಯ ಸ್ಥಿತಿಯಿಟ್ಟುಕೊಂಡು ಬರುತ್ತಿದ್ದ ರೋಗಿಗಳನ್ನು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂಬ ನೆಪ ನೀಡಿ ಮರಳಿ ಕಳುಹಿಸುತ್ತಿದ್ದರು ಹಾಗೂ ಅಂಥ ರೋಗಿಗಳು ದಾರಿಮಧ್ಯೆ ಅಸುನೀಗಿದ ಪ್ರಕರಣಗಳು ನಡೆದಿದ್ದವು. ಇದನ್ನು ಅನುಸರಿಸಿ […]
ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಭರವಸೆ | ಜುಲೈನಲ್ಲಿ ಸೇಲ್ಸ್ ಸುಧಾರಣೆ. ಎಕನಾಮಿಕ್ ಟೈಮ್ಸ್ ಮುಂಬಯಿ. ಕೆಲವು ಕಂಪನಿಗಳ ಪ್ಯಾಸೆಂಜರ್ ವಾಹನಗಳ ಮಾರಾಟ ಜೂನ್ಗೆ ಹೋಲಿಸಿದರೆ, ಜುಲೈನಲ್ಲಿ ದ್ವಿಗುಣಗೊಂಡಿದೆ. ಕೋವಿಡ್ ಪೂರ್ವ ದಿನಗಳ ಮಟ್ಟಕ್ಕೆ ಮಾರಾಟ ತಲುಪಿದೆ. ಸಣ್ಣ ಕಾರುಗಳು, ಸೆಡಾನ್ ಮತ್ತು ಎಸ್ಯುವಿಗಳ ಮಾರಾಟ ಸುಧಾರಿಸುತ್ತಿದ್ದು, ಆರ್ಥಿಕತೆ ಚೇತರಿಕೆಗೆ ಈ ಅಂಶವು ಸೂಚಕದಂತಿದೆ. ಇತ್ತ, ಟ್ರ್ಯಾಕ್ಟರ್ಗಳ ಮಾರಾಟ ಜುಲೈನಲ್ಲಿ ಏರಿಕೆಯಾಗಿದೆ. ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ಗಳ ಮಾರಾಟವು ಜುಲೈನಲ್ಲಿ ಶೇ.28ರಷ್ಟು ಏರಿಕೆಯಾಗಿದೆ. ಉದ್ಯಮದ ಅಂದಾಜುಗಳ ಪ್ರಕಾರ, 1,97,523 ಪ್ಯಾಸೆಂಜರ್ ವಾಹನಗಳು […]
ಕೊರೊನಾದಿಂದಾಗಿ ಊರಲ್ಲೇ ಇದ್ದಾರೆ ಸೋದರರು | ಅಂಚೆಯಣ್ಣನಿಗೆ ಕೆಲಸ ಕಡಿಮೆ. ಬೆಳಗಾವಿ: ರಕ್ಷಾ ಬಂಧನ ಮಾರಾಟ ನಡೆದರೂ ಯಾರೂ ಪಾರ್ಸೆಲ್ ರವಾನೆ ಮಾಡುತ್ತಿಲ್ಲ. ಎಲ್ಲರೂ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಈ ಸಲ ಕೊರಿಯರ್, ಅಂಚೆಯಣ್ಣನಿಗೆ ಕೆಲಸ ಕಡಿಮೆ!! ಉದ್ಯೋಗದ ಕಾರಣ ಎಷ್ಟೋ ಸಹೋದರ, ಸಹೋದರಿಯರಿಗೆ ಹಬ್ಬಕ್ಕೆ ಊರಿಗೆ ಹೋಗಲು ಆಗುತ್ತಿರಲಿಲ್ಲ. ಹಾಗಾಗಿ ಅಂಚೆಯೇ ಮಾಧ್ಯಮವಾಗಿತ್ತು. ಕೆಲವರಿಗೆ ಹಬ್ಬ ಕಳೆದು ವಾರದ ನಂತರ ರಾಖಿ ತಲುಪುತ್ತಿತ್ತು. ಅದರೆ ಈ ಸಲ ಕೊರೊನಾ ಕಾರಣಕ್ಕೆ ಹೆಚ್ಚಿನ ಅಣ್ಣ- ತಂಗಿ, ಅಕ್ಕ- […]
ರಾತ್ರಿ 8ರಿಂದ ಬೆಳಗ್ಗೆ 4ರವರೆಗೆ ನಿದ್ದೆಗೆ ಅವಕಾಶ * ರಾತ್ರಿ ಟಿವಿ ಇರಬಾರದು * ಪುತ್ತಿಗೆ ಶ್ರೀ ಸಲಹೆ. ವಿಕ ಸುದ್ದಿಲೋಕ ಉಡುಪಿ. ಮನುಷ್ಯನ ಪ್ರತಿರೋಧ ಶಕ್ತಿ ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ರಾತ್ರಿ 8ರಿಂದ ಬೆಳಗ್ಗೆ 4ರ ತನಕ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಲು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಸಲಹೆ ನೀಡಿದ್ದಾರೆ. ಸೋಂಕಿನಿಂದ ಗುಣಮುಖರಾದ ಅವರು ಪ್ರಕಟಣೆಯಲ್ಲಿ ಸಂದೇಶ ನೀಡಿದ್ದು ಈ ಬಗ್ಗೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಆರೋಗ್ಯ ವ್ಯವಸ್ಥೆಯನ್ನು ಪುನರ್ ನವೀಕರಿಸುವ ಯೋಗ, ಪ್ರಾಣಾಯಾಮ, […]
ಕೊರೊನಾ ಭಯಕ್ಕೆ ಕೈ ಹಿಡಿದು ನಡೆಸೋರಿಲ್ಲ, ಬಸ್ ಹತ್ತಿಸುವುದಕ್ಕೂ ಹಿಂಜರಿಯುತ್ತಿರುವ ಜನರು. ಗಿರೀಶ ಎಸ್. ಕಲ್ಗುಡಿ ತುಮಕೂರು. ಯಾರನ್ನೂ ಸ್ಪರ್ಶಿಸಬಾರದು, ಸಾಮಾಜಿಕ ಅಂತರ ಕಾಯಬೇಕೆಂಬ ಕೊರೊನಾ ನಿಯಮಾವಳಿ ವಿಶೇಷಚೇತನರ ಜೀವನವನ್ನು ಇನ್ನಷ್ಟು ಹದಗೆಡಿಸಿದೆ. ಹೀಗಾಗಿ ರಸ್ತೆ ದಾಟಲು ಸಹಾಯ ಮಾಡೋರಿಲ್ಲ, ಕೈ ಹಿಡಿದು ಬಸ್ ಹತ್ತಿಸೋರಿಲ್ಲ, ಕಚೇರಿಗಳಲ್ಲಿ ನೆರವು ನೀಡೋರಿಲ್ಲದೆ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚಿನವರಿಗೆ ಸಹಾಯ ಮಾಡುವ ಮನಸ್ಸಿದ್ದರೂ ಕೊರೊನಾ ಭಯ, ಸಾಮಾಜಿಕ ಕಿರಿಕಿರಿಗಳು ಅವರನ್ನು ಹತ್ತಿರ ಬರದಂತೆ ಮಾಡಿ, ಮನದಲ್ಲೇ ಮರುಗುವಂತೆ ಮಾಡಿದೆ. ರಾಜ್ಯದಲ್ಲಿ […]
ಕರ್ನಾಟಕ ಸರಕಾರ ಇಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ನಡೆಸುವ ಸಿಇಟಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಗುರುವಾರ ಹಾಗೂ ಶುಕ್ರವಾರ ಸುಮಾರು 497 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪಿಯುಸಿ ಇಂಗ್ಲಿಷ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಲಾಕ್ಡೌನ್ ಸಂದರ್ಭದಲ್ಲಿಯೇ ಯಶಸ್ವಿಯಾಗಿ ನಡೆಸಿದ್ದ ಸರಕಾರ, ಈಗ ಸಿಇಟಿಯನ್ನೂ ನೆರವೇರಿಸಿ ಸೈ ಎನ್ನಿಸಿಕೊಂಡಿದೆ. ಇದರಲ್ಲಿ 63 ಮಂದಿ ಕೋವಿಡ್ ಸೋಂಕಿತರೂ ಇದ್ದುದು ವಿಶೇಷ. ಈ ವಿದ್ಯಾರ್ಥಿಗಳು ಪರೀಕ್ಷೆಗಳಿಂದ ವಂಚಿತರಾಗದಂತೆ ನೋಡಿಕೊಂಡ ಪರೀಕ್ಷಾ ಪ್ರಾಧಿಕಾರದ […]