ಅಂದು ವೀರೇಂದ್ರ ಪಾಟೀಲ್, ಇಂದು ಬಿಎಸ್​ವೈ, ಮುಂದ?

ಈಗಿನ ಸನ್ನಿವೇಶವನ್ನು ಅವಲೋಕಿಸಿದರೆ, ವೀರಶೈವ-ಲಿಂಗಾಯತಕ್ಕೆ ಸೂತ್ರಸಂಬಂಧ ಇಲ್ಲದವರು ಧರ್ಮ ಸ್ಥಾಪನೆಗೆ ಮುಂದಾಗಿರುವುದು ಕಾಣುತ್ತದೆ. ಈ ವಿಷಯವನ್ನು ಧರ್ಮ, ಸಂಸ್ಕೃತಿ, ಇತಿಹಾಸ, ಪುರಾಣಗಳ ತಳಹದಿಗಿಂತ ಹೆಚ್ಚಾಗಿ ರಾಜಕೀಯದ ಹಿನ್ನೆಲೆಯಿಂದ ನೋಡುವುದೇ ಉಚಿತ ಎನಿಸುತ್ತದೆ. ಸಿಎಂ ಸಿದ್ದರಾಮಯ್ಯನವರ ಆಸಕ್ತಿಯಂತೆ ಲಿಂಗಾಯತ ಧರ್ಮದ ಸ್ಥಾಪನೆಗೆ ರಾಜ್ಯ ಸರ್ಕಾರವೇ ಪೌರೋಹಿತ್ಯ ವಹಿಸಿಕೊಂಡ ಮೇಲೆ ಹತ್ತು ಹಲವು ಟೀಕೆಗಳು ಕೇಳಿಬರುತ್ತಲೇ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆ ಪೈಕಿ ಗಮನ ಸೆಳೆದ ಒಂದು ಹೇಳಿಕೆ- ಅಂದು ಎಲ್ಲ ಜಾತಿಗಳನ್ನೂ ಒಂದುಮಾಡಲು ಪ್ರಯತ್ನಪಟ್ಟರು […]

Read More

ಹಿಂದುತ್ವವಲ್ಲ ದ್ವಂದ್ವತ್ವದತ್ತ ಕಾಂಗ್ರೆಸ್ ರಾಗಾ!

ನಟ ಪ್ರಕಾಶ್ ರೈ ಮುಂದಿಡುತ್ತಿರುವ ವಾದಗಳ ಕುರಿತು ತದನಂತರದಲ್ಲಿ ಚರ್ಚೆ ಮಾಡೋಣ. ಅದಕ್ಕೂ ಮೊದಲು ಗಮನಿಸಲೇಬೇಕಾದ ಕೆಲ ಸಂಗತಿಗಳಿವೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗ್ರಪ್ರಾಶಸ್ತ್ಯ ಇರುವುದು ನಿಜ. ಆದರೆ ಅದರ ಅರ್ಥ ಯಾರು ಬೇಕಾದರೂ, ಯಾರ ವಿರುದ್ಧ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು ಅಂತಲ್ಲ. ಬಾಯಿಗೆ ಬಂದಂತೆ ಮಾತನಾಡಿದರೆ ಟಿವಿ ಚಾನೆಲ್​ಗಳಿಗೆ ಆಹಾರ ಆಗಬಹುದೇ ಹೊರತು ಆಡಿದವನ ವ್ಯಕ್ತಿತ್ವವೇನೂ ಅರೆಕ್ಷಣದಲ್ಲಿ ಹಿಮಾಲಯದ ಎತ್ತರಕ್ಕೆ ಏರುವುದಿಲ್ಲ. ಇತಿಹಾಸ, ಪರಂಪರೆ ಬದಲಾಗಿಹೋಗುವುದಿಲ್ಲ. ಜನರು ನಂಬಿ ಅನುಸರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು […]

Read More

ಇವರು ಆಧುನಿಕ ಪೂತನಿಗಳು, ಹುಷಾರು!

ಮಾಧ್ಯಮಗಳು ಮತ್ತು ಪತ್ರಕರ್ತರು ಕ್ರಿಯಾತ್ಮಕವಾಗಿರಬೇಕೇ ಹೊರತು ಪ್ರತಿಕ್ರಿಯಾತ್ಮಕವಾಗಿರಬಾರದು ಎಂಬುದು ಬಲವಾದ ನಂಬಿಕೆ. ಆದರೆ ತೀರಾ ಮಾಧ್ಯಮ ಕ್ಷೇತ್ರ ಮಾರಾಟವಾಗಿದೆ, ಪತ್ರಕರ್ತರು ಗುಲಾಮರಾಗಿದ್ದಾರೆ ಎಂದು ಹೇಳಿದಾಗ ಇನ್ನು ಸುಮ್ಮನಿರಬಾರದು ಎನಿಸಿತು. ಹೇಳಲೇಬೇಕಾಯಿತು.  ಬುದ್ಧಿಜೀವಿಯ ವರಸೆಯಲ್ಲಿ ಮಲಯಾಳಂ ಲೇಖಕ ಪೌಲ್ ಝುಕಾರಿಯಾ ದಿ| ಅನಂತಮೂರ್ತಿಯವರನ್ನೂ ಮೀರಿಸುವ ಹಾಗೆ ತೋರುತ್ತಿದೆ. 2014ರ ಲೋಕಸಭಾ ಚುನಾವಣೆಗೆ ಮುನ್ನ ಅನಂತಮೂರ್ತಿಯವರು ‘ಒಂದೊಮ್ಮೆ ಮೋದಿ ಈ ದೇಶದ ಪ್ರಧಾನಿಯಾದರೆ ನಾನು ದೇಶ ತೊರೆಯುತ್ತೇನೆ’ ಎಂದಿದ್ದರು. ಅದು ವ್ಯಾಪಕ ಚರ್ಚೆಗೆ ಗ್ರಾಸವಾದಾಗ ತಮ್ಮ ಮಾತಿಗೆ ವಿವರಣೆ ನೀಡಿ […]

Read More

ಅಮ್ಮನಿಂದ ಮಗನಿಗೆ ಹಸ್ತಾಂತರ, ನಂತರ…?

ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ದಿನಗಳು ಸಮೀಪಿಸುತ್ತಿವೆ. ಅವರ ಉತ್ತರಾಧಿಕಾರಿಯಾಗಿ ರಾಹುಲ್ ಗಾಂಧಿ ನೇಮಕ ಆಗುವುದೂ ನಿಚ್ಚಳವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇವೆರಡೂ ಘಟನೆಗಳು ಜರುಗಲು ಹೆಚ್ಚು ಕಾಲ ಹಿಡಿಯುವುದಿಲ್ಲ. ಸೋನಿಯಾ ನಿರ್ಗಮನ ಮತ್ತು ರಾಹುಲ್ ಆಗಮನ ಕ್ಷಣಗಳಿಗೆ ಬೆಂಗಳೂರಲ್ಲಿ ನಡೆಯುವ ಎಐಸಿಸಿ ಅಧಿವೇಶನವೇ ವೇದಿಕೆಯಾಗಲಿದೆ ಎಂಬುದು ಮತ್ತೊಂದು ವಿಶೇಷ. ಇದು ಕಾಕತಾಳೀಯವೋ ಏನೋ ಗೊತ್ತಿಲ್ಲ, ಸೋನಿಯಾ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೂ ಕಾಂಗ್ರೆಸ್ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿತ್ತು. ಈಗ ಅವರು ನಿರ್ಗಮಿಸುವ […]

Read More

ದೇಶದ ಘನತೆ ಕಾಯದವರು ಆಳಲು ಅರ್ಹರೆ? (16 .09.2017)

ಕೆಲವು ಎನ್​ಜಿಒಗಳು ಭಾರತದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲೆಂದೇ ಕಾರ್ಯನಿರ್ವಹಿಸುತ್ತಿವೆ. ಈ ಘನಂದಾರಿ ಕೆಲಸಕ್ಕಾಗಿ ಅವಕ್ಕೆ ಅಪಾರ ಪ್ರಮಾಣದ ಧನ ಸಹಾಯವೂ ಬರುತ್ತದೆ. ಈ ಹುನ್ನಾರವನ್ನು ಅರಿಯದೆ ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಕ್ಕೆ ಏನೆನ್ನಬೇಕೋ ತಿಳಿಯದು. ರಾಹುಲ್ ಗಾಂಧಿ ಕೊನೆಗೂ ಕಾಂಗ್ರೆಸ್ ಗಾಡಿಯ ನೊಗಕ್ಕೆ ಹೆಗಲು ಕೊಡಲು ಮನಸ್ಸು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ದೇಶದ ಪ್ರಧಾನಮಂತ್ರಿಯೂ ಆಗುತ್ತೇನೆಂದು ಹೇಳುವ ಧೈರ್ಯ ತೋರಿದ್ದಾರೆ. ಅದು ಒಳ್ಳೆಯದೇ ಅಂತಿಟ್ಟುಕೊಳ್ಳೋಣ. ಈ ಘೊಷಣೆಯಿಂದ ಯಾರಿಗೆ ಎಷ್ಟು ಸಮಾಧಾನ, ಖುಷಿಯಾಗಿದೆಯೋ […]

Read More

ಆಗ ಚೀನಾದೆದುರು ಸೋತ ಭಾರತ ಈಗ ಗೆದ್ದಿದ್ದು ಹೇಗೆ? (02.09.2017)

ತನ್ನ ಸಾಮ್ರಾಜ್ಯವಾದ ವಿಸ್ತರಣೆಗೆ ಭಾರತವೇ ದೊಡ್ಡ ಅಡ್ಡಿ ಎಂಬುದು ಚೀನಾದ ಅಸಮಾಧಾನ. ಹೀಗಾಗಿ ಲಭ್ಯ ವೇದಿಕೆಗಳನ್ನೆಲ್ಲ ಬಳಸಿಕೊಂಡು ಭಾರತಕ್ಕೆ ತಲೆನೋವು ತರುವುದು ಅದರ ಕಾರ್ಯತಂತ್ರ. ಆದರೆ ಭಾರತ ಬದಲಾಗಿದೆ ಎಂಬ ಸ್ಪಷ್ಟ ಸಂದೇಶ ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ ರವಾನೆಯಾಗಿದೆ. ಇನ್ನೇನು ಭಾರತದ ಮೇಲೆ ಚೀನಾ ಯುದ್ಧ ನಡೆಸಿಯೇಬಿಟ್ಟಿತು ಎಂಬ ಸ್ಥಿತಿ ನಿರ್ಮಾಣ ಆದಾಗಲೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ಮುರಿಯಲಿಲ್ಲ? ಚೀನಾದ ಸತತ ತರ್ಲೆಗಳಿಗೆ ಬಹಿರಂಗ ಉತ್ತರ ಕೊಡುವುದಕ್ಕೆ ಅವರೇಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳಿಗೆ ಈಗ […]

Read More

ಅಹಮದ್ ಪಟೇಲರ ಎದೆಬಡಿತ ಹೆಚ್ಚಿಸಿದ್ದು ತಪ್ಪಾ ಒಪ್ಪಾ? (12 .08.2017)

ಸರಿ-ತಪ್ಪುಗಳು ಕಾಲ ಬದಲಾದಂತೆ ಬದಲಾಗುವುದಿಲ್ಲ. ನ್ಯಾಯ-ಅನ್ಯಾಯಗಳು ಕೂಡ ಅದೇ ರೀತಿ. ಜೀವನದ ಮೌಲ್ಯಗಳೂ ಅಷ್ಟೇ. ಹಾಗೇನೆ ತಾನು ಏಟು ತಿಂದಾಗ ನೋವಾಯಿತು ಎಂದು ಅಳುವವರು ತಾವು ಬೇರೆಯವರಿಗೆ ಏಟು ಕೊಟ್ಟಾಗಲೂ ಅದೇ ರೀತಿ ನೋವಾಗುತ್ತದೆ ಎಂದು ತಿಳಿದುಕೊಳ್ಳಬೇಕಲ್ಲವೇ? ಅಹಮದ್ ಪಟೇಲ್ ವಿಚಾರಕ್ಕೆ ಆಮೇಲೆ ಬರೋಣ. ಅದಕ್ಕಿಂತ ಮೊದಲು ಇಬ್ಬರು ವ್ಯಕ್ತಿಗಳ ಜಾತಕವನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಒಬ್ಬಾಕೆ ಇಷ್ರತ್ ಜಹಾನ್. ಮತ್ತೊಬ್ಬಾತ ಸೊಹ್ರಾಬುದ್ದೀನ್ ಶೇಖ್. ಈ ಇಬ್ಬರೂ ಗುಜರಾತ್ ಮತ್ತು ರಾಜಸ್ಥಾನ ಪೊಲೀಸರ ಗುಂಡಿಗೆ ಸಾವನ್ನಪ್ಪಿದವರು. ಇವರ […]

Read More

ಮತ ಬ್ಯಾಂ​ಕೇ ಮುಖ್ಯವಾದರೆ ಮತ್ತೇನಾದೀತು… (29 .07 .2017)  

  ಇವರ ಜಾತ್ಯತೀತವಾದದ ಹಣೆಬರಹವೇ ಇಷ್ಟು ಅನ್ನುವ ತೀರ್ಮಾನಕ್ಕೆ ಬರದೇ ವಿಧಿಯಿಲ್ಲ. ಬೇರೆಲ್ಲ ಬಿಟ್ಟು ಈಗ ಶುರು ಆಗಿದೆ ಲಿಂಗಾಯತ ಧರ್ಮ ಸ್ಥಾಪನೆಯ ಚರ್ಚೆ. ಇದಕ್ಕೆ ಕಾರಣ ಮುಂಬರುವ ವಿಧಾನಸಭೆ ಚುನಾವಣೆ ಮೇಲಿನ ದೃಷ್ಟಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಮಾತು ಚೆನ್ನಾಗಿ ಅರ್ಥ ಆಗಬೇಕೆಂದರೆ, ಲಿಂಗಾಯತ ಧರ್ಮ ಸ್ಥಾಪನೆಯ ವಿಚಾರಕ್ಕಿಂತ ಮೊದಲು ಬಾಕಿ ಇನ್ನೊಂದಿಷ್ಟು ಸಂಗತಿಗಳತ್ತ ಮೆಲುಕು ಹಾಕಬೇಕು. 1985ರ ಸಂದರ್ಭ. ಆಗ ರಾಜೀವ ಗಾಂಧಿ ಈ ದೇಶದ ಪ್ರಧಾನಿ ಆಗಿದ್ದರು. ಪಶ್ಚಿಮ ಬಂಗಾಳದಲ್ಲಿ […]

Read More

ಕೇರಳದ ಈ ಮಾದರಿ ಕರ್ನಾಟಕಕ್ಕೆ ಖಂಡಿತ ಬೇಡ… ( 15 .07 .2017 )

ಕರ್ನಾಟಕ ಮತ್ತೊಂದು ಕೇರಳ ಆಗುತ್ತಿದೆಯೇ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಚಾಲ್ತಿಗೆ ಬಂದಿದೆ, ಚರ್ಚೆಗೆ ತಿರುಗಿದೆ. ಕೇರಳ ಅಂದರೆ ಮೊದಲು ನೆನಪಾಗುತ್ತಿದ್ದುದು ಧಾರ್ವಿುಕತೆ, ಅಧ್ಯಾತ್ಮ, ಕಲೆ, ಸಂಗೀತ, ನೃತ್ಯ, ಕಲಾತ್ಮಕ ದೇವಾಲಯಗಳ ವೈಭವದ ಪರಂಪರೆ ಇತ್ಯಾದಿ. ಆ ದೃಷ್ಟಿಯಲ್ಲಿ ನೋಡಿದರೆ ಕೇರಳ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ, ಅದರಾಚೆಗಿನ ಪ್ರಪಂಚಕ್ಕೆಲ್ಲ ಮಾದರಿಯೆಂದರೂ ಅತಿಶಯೋಕ್ತಿಯಲ್ಲ. ಅಂತಹ ಕೇರಳದ ಮಾದರಿ ದೂರದ ಇಸ್ರೇಲ್​ವರೆಗೂ ಹಬ್ಬಿರುವುದನ್ನು ನಾವು ಕೇಳಿದ್ದೇವೆ, ಪ್ರತ್ಯಕ್ಷ ನೋಡಿದ್ದೇವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್​ಗೆ ಭೇಟಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top