ಭಾರತೀಯ ಸಂಪ್ರದಾಯದಲ್ಲಿ ಆಷಾಢ ಮಾಸ ಶುಕ್ಲಪಕ್ಷದ ಏಕಾದಶಿಯಿಂದ ಆರಂಭಿಸಿ ಕಾರ್ತಿಕ ಮಾಸದ ಶುಕ್ಲ ಏಕಾದಶಿವರೆಗಿನ ಅವಧಿಯಲ್ಲಿ ಯತಿಗಳು ಚಾತುರ್ಮಾಸ ವ್ರತಾಚರಣೆ ಕೈಗೊಳ್ಳುತ್ತಾರೆ. ಯತಿಗಳು ಮಳೆಗಾಲದಲ್ಲಿ ಒಂದೆಡೆ ನೆಲೆ ನಿಂತು ಧರ್ಮ, ಹಿತವಚನ ಬೋಧಿಸುವ ಸುಸಂದರ್ಭ ಇದು. ಚಾತುರ್ಮಾಸದಲ್ಲಿ ನದಿ, ತೊರೆಗಳನ್ನು ದಾಟಬಾರದು ಎಂಬ ನಿಯಮವೂ ಇದೆ. ಆಹಾರದಲ್ಲೂ ಕಟ್ಟಳೆಗಳಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಯತಿಗಳ ಚಾತುರ್ಮಾಸ್ಯ ವ್ರತ ಆರಂಭವಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಯತಿಗಳು, ಶ್ರೀಗಳು ತಮ್ಮ ಮಠಗಳಲ್ಲೇ ಈ ಬಾರಿ ಚಾರ್ತುಮಾಸ ವ್ರತಾಚಾರಣೆ ಮಾಡುತ್ತಿದ್ದಾರೆ. – ಶೃಂಗೇರಿ […]