– ಮಯೂರಲಕ್ಷ್ಮೀ. 1897, ಜೂನ್ 11ರಂದು ಬ್ರಿಟಿಷರ ಆಡಳಿತದ ವಾಯುವ್ಯ ಪ್ರಾಂತದ ಶಹಜಹಾನ್ಪುರದಲ್ಲಿ ಜನ್ಮ ತಳೆದ ಪಂಡಿತ್ ರಾಮ್ಪ್ರಸಾದ್ ಬಿಸ್ಮಿಲ್ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಬಲಿದಾನಿ. ತಂದೆಯವರಿಂದ ಮನೆಯಲ್ಲೇ ಶಿಕ್ಷಣ ಪಡೆದ ರಾಮ್ಪ್ರಸಾದ್ ಬಿಸ್ಮಿಲ್ ಬಾಲ್ಯದಿಂದಲೇ ಸಾಹಿತ್ಯ ರಚನೆ ಮತ್ತು ಭಾಷಾ ನೈಪುಣ್ಯ ಹೊಂದಿದ್ದರು. ಮೌಲ್ವಿಯೊಬ್ಬರಿಂದ ಉರ್ದು ಭಾಷೆಯಲ್ಲೂ ಪಾಂಡಿತ್ಯ ಪಡೆದಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ‘ಬಿಸ್ಮಿಲ್’ ಎಂದೇ ಜನಪ್ರಿಯರಾಗಿದ್ದು ರಾಮ್, ಅಗ್ಯತ್ ಎನ್ನುವ ಕಾವ್ಯನಾಮಗಳಲ್ಲಿ ಅಸಂಖ್ಯಾತ ದೇಶಭಕ್ತಿಯ ಕವನಗಳನ್ನು ರಚಿಸಿದರು. ಲಾಲಾ ಹರದಯಾಳ್ […]