ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ ಭಾರತೀಯ ಸೈನ್ಯದ ಬಿಹಾರ್ ರೆಜಿಮೆಂಟ್ನ ಯೋಧರ ದಿಟ್ಟತನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಿಹಾರ್ ರೆಜಿಮೆಂಟ್ನ ಇತಿಹಾಸ, ಅದು ಮಾಡಿದ ಸಾಧನೆಗಳನ್ನು ತಿಳಿಯೋಣ ಬನ್ನಿ. ಗಲ್ವಾನ್ ಕಣಿವೆಯಲ್ಲಿ ಭಾರತ- ಚೀನಾ ಸೈನಿಕರ ನಡುವೆ ನಡೆದ ತಿಕ್ಕಾಟದ ವೇಳೆ ಅಲ್ಲಿದ್ದ ಭಾರತದ ಕಡೆಯ ಸೇನಾಯೋಧರು ಪ್ರದರ್ಶಿಸಿದ್ದು ಬರಿಯ ಧೈರ್ಯ, ಹೋರಾಟದ ಕೆಚ್ಚೆದೆ ಮಾತ್ರವಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ದುಶ್ಶಾಸನನ ಎದೆ ಸೀಳಿದ ಸಂದರ್ಭದಲ್ಲಿ ಭೀಮಸೇನ ಪ್ರದರ್ಶಿಸಿದಂಥ ಭೀಭತ್ಸ ಸನ್ನಿವೇಶವನ್ನೇ ನಮ್ಮ ಯೋಧರು ಅಲ್ಲಿ ಸೃಷ್ಟಿಸಿದ್ದರು […]
Read More
ಕೋಟ್ಯಂತರ ಭಕ್ತರ ಹಲವು ವರ್ಷಗಳ ಕನಸು ಈಡೇರುವ ಗಳಿಗೆ ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ(ಜೂ.10)ರಂದು ಶಿಲಾನ್ಯಾಸ ನಡೆಯಲಿದೆ. ರಾಮಜನ್ಮಭೂಮಿ ವ್ಯಾಪ್ತಿಯಲ್ಲೇ ಇರುವ ‘ಕುಬೇರ ತಿಲ’ ಮಂದಿರದಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡುವುದರೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ‘‘ಲಂಕಾ ಮೇಲಿನ ದಾಳಿಗೂ ಮುನ್ನ ಶ್ರೀರಾಮಚಂದ್ರನು ಶಿವನನ್ನು ಪ್ರಾರ್ಥಿಸಿದ್ದ. ಅದೇ ಸಂಪ್ರದಾಯವನ್ನು ಈಗ ಪಾಲಿಸುತ್ತಿದ್ದೇವೆ. ರುದ್ರಾಭಿಷೇಕದ ಬಳಿಕವೇ ರಾಮ ಮಂದಿರ ಶಿಲಾನ್ಯಾಸದ ಕಾರ್ಯಕ್ರಮಗಳು ಆರಂಭವಾಗಲಿವೆ,’’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ವಕ್ತಾರರಾದ ಮಹಾಂತ ಕಮಲನಯನ ದಾಸ್ […]
Read More