ಪ್ರಜಾತಂತ್ರದ ಮೂರು ಮುಖ್ಯ ಅಂಗಳಲ್ಲಿ ಶಾಸಕಾಂಗ ಮತ್ತು ಕಾರ್ಯಂಗದ ಬಗ್ಗೆ ಈಗಾಗಲೇ ಜನರು ಭರವಸೆ ಕಳೆದುಕೊಂಡಿದ್ದಾರೆ ಎಂಬ ಮಾತು ದಟ್ಟವಾಗಿದೆ. ಹಾಗಾದರೆ ಮೂರನೇ ಮುಖ್ಯ ಅಂಗವಾದ ನ್ಯಾಯಾಂಗವಾದರೂ ಈ ಅಪವಾದದಿಂದ ದೂರ ಉಳಿಯಬೇಕಲ್ಲವೇ? ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮೂರು ಆಧಾರಸ್ತಂಭಗಳು ಎಂಬುದು ಒಂದು ಸ್ಥಾಪಿತ ಹೇಳಿಕೆಯಾಗಿ, ಅದು ಸಾಂಪ್ರದಾಯಿಕವಾಗಿ ಮುಂದುವರಿದುಕೊಂಡು ಬಂದ ನಂಬಿಕೆ ಎಂದರೂ ತಪ್ಪಲ್ಲ. ಅದಿಲ್ಲ ಅನ್ನುವುದಾದರೆ ಶಾಸಕಾಂಗ ಮತ್ತು ನ್ಯಾಯಾಂಗಗಳ ವ್ಯಾಪ್ತಿ ಹಾಗೂ ಹೆಚ್ಚುಗಾರಿಕೆ ವಿಷಯಕ್ಕೆ ಸಂಬಂಧಿಸಿ ಈ […]
Read More
ಶ್ರೀನಿವಾಸ ಪ್ರಸಾದ್ ರಾಜೀನಾಮೆ ಅಂಗೀಕಾರಕ್ಕೆ ಮೀನಮೇಷ ನಡೆದಿದೆ. ಉಪಚುನಾವಣಾ ಕದನಕಣಕ್ಕೆ ಹೆದರಿ ಸರ್ಕಾರ ಇಂಥ ನಿಲುವಿಗೆ ಬಂದಿದೆ ಎಂಬ ಚರ್ಚೆಯೂ ಶುರುವಾಗಿದೆ. ಹಾಗಾದರೆ ಇದು ಸಿದ್ದು ಸರ್ಕಾರದ ಯಡವಟ್ಟುಗಳ ಸಾಲಿಗೆ ಹೊಸ ಸೇರ್ಪಡೆ ಆಗುವುದೇ? ಹಿಂದೆಯೂ ಸರ್ಕಾರ ಅನೇಕ ಪ್ರಕರಣಗಳಲ್ಲಿ ಎಡವಟ್ಟು ಮಾಡಿಕೊಂಡಿದ್ದಿದೆ. ಸರಿಯಾಗಿ ಹತ್ತು ವರ್ಷದ ನಂತರ ಮತ್ತೊಂದು ಅಂಥದ್ದೇ ಸನ್ನಿವೇಶ ನಿರ್ವಣವಾಗಿದೆ! ಪಾತ್ರಧಾರಿಗಳು ಅದಲುಬದಲು ಅಷ್ಟೇ. ಅಂದು ಸಿದ್ದರಾಮಯ್ಯ. ಇಂದು ಶ್ರೀನಿವಾಸ ಪ್ರಸಾದ್. ದೇವೇಗೌಡರು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿದರು ಎಂಬ ಕಾರಣಕ್ಕೆ ಬಂಡಾಯ ಸಾರಿ […]
Read More
ಸಾಮಾಜಿಕ ಹೋರಾಟವೇ ಬೇರೆ. ರಾಜಕೀಯ ಹೋರಾಟವೇ ಬೇರೆ. ಎರಡನ್ನೂ ಬೆರೆಸಿದರೆ ಏನು ಅನಾಹುತ ಆಗಬಹುದೋ ಅದೇ ಆಗುತ್ತಿದೆ ಈಗ ಆಮ್ ಆದ್ಮಿ ಪಕ್ಷದ ಸಂದರ್ಭದಲ್ಲಿ. ಅಣ್ಣಾ ಹಜಾರೆಗೆ ಗೊತ್ತಿದ್ದ ಈ ಸತ್ಯ ಕೇಜ್ರಿವಾಲ್ಗೆ ಗೊತ್ತಾಗದೆ ಹೋದದ್ದೇ ಅಚ್ಚರಿ. ಅದೊಂದು ಸಣ್ಣ ಹೇಳಿಕೆ. ಆದರೆ ಅದರ ಹಿಂದೆ ಹುಟ್ಟಿಕೊಳ್ಳುವ ಆಲೋಚನೆ ಸಣ್ಣದಲ್ಲ. ನೀವೂ ಓದಿರುತ್ತೀರಿ. ದೆಹಲಿಯಲ್ಲಿ ಚಿಕೂನ್ಗುನ್ಯಾ, ಡೆಂಘೆ ಕಾಯಿಲೆ ಹತೋಟಿ ಮೀರುತ್ತಿರುವುದರ ಕುರಿತು ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೀಡಿದ ಹೇಳಿಕೆ ಅದು- ‘ಹೌದು, ನಾನು ಅಸಹಾಯಕ, […]
Read More
ಬಿಬಿಎಂಪಿ ಚುನಾವಣೆ ಒಂಥರಾ ಸಾರ್ವತ್ರಿಕ ಚುನಾವಣೆ ಇದ್ದಂತೆ. ಇದು ರಾಜ್ಯರಾಜಕಾರಣದ ದಿಕ್ಸೂಚಿಯೂ ಹೌದು. ರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುವ ಸಾಧ್ಯತೆಯೂ ಹೆಚ್ಚು. ಈ ಎಲ್ಲ ಕಾರಣಗಳಿಗಾಗಿ ಈ ಚುನಾವಣೆ ಸಿಎಂ ಸಿದ್ದರಾಮಯ್ಯ ಪಾಲಿಗೆ ನಿಜವಾದ ಸವಾಲು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೃಷ್ಟದ ಕೈಚಳಕವನ್ನು ನಂಬುತ್ತಾರೋ ಇಲ್ಲವೋ? ಅದು ಬೇರೆ ವಿಚಾರ. ಆದರೆ ಅವರು ಈ ರಾಜ್ಯ ಕಂಡ ಮಹಾ ಅದೃಷ್ಟವಂತ ಮುಖ್ಯಮಂತ್ರಿ ಎಂಬುದರಲ್ಲಿ ಅನುಮಾನವಿಲ್ಲ. ರಾಜಕೀಯ ಏರಿಳಿತದ ಹಾದಿಯಲ್ಲಿ ಅನಿರೀಕ್ಷಿತ ತಿರುವಿನಲ್ಲಿ ಸಾಗಿ ಕಾಂಗ್ರೆಸ್ ಪಕ್ಷದ ಕದ ತಟ್ಟಿದ […]
Read More
ಅರಸು ಚಿಂತನೆಯ ನೆರಳಲ್ಲಿ ಮತ್ತು ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ರಾಜಕೀಯದಲ್ಲಿ ಹಂತಹಂತವಾಗಿ ಮೇಲೇರಿ ಸಿಎಂ ಪಟ್ಟದವರೆಗೆ ತಲುಪಿದ ಸಿದ್ದರಾಮಯ್ಯ, ಅಧಿಕಾರದ ಉತ್ತರಾರ್ಧದಲ್ಲಾದರೂ ತಮ್ಮ ಮೂಲತನವನ್ನು ನೆನಪಿಸಿಕೊಂಡು ಆಡಳಿತದಲ್ಲಿ ಸ್ವಂತಿಕೆಯ ಛಾಪೊತ್ತುವರೇ? ಅಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ನಡೆಸಿದ ಪಾದಯಾತ್ರೆಯ ನೆನಪು ಈಗಲೂ ಹಚ್ಚಹಸಿರು. ರಾಜ್ಯ ರಾಜಕೀಯದ ಪಾಲಿಗೆ ಅದೇ ಪರಿವರ್ತನೆಯ ರಣಕಹಳೆ ಆದದ್ದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿಡಿದಿದ್ದ ಗ್ರಹಣ ಬದಿಗೆ ಸರಿಯಲೂ ಅದೇ […]
Read More
ರಾಜಕಾರಣಿಗಳ ಬಗ್ಗೆ ಜನರಲ್ಲಿ ಯಾಕಿಷ್ಟು ಆಕ್ರೋಶ? ಮರಳುಗಾಡಿನಲ್ಲಿ ಓಯಸಿಸ್ನಂತೆ ರವಿಯಂತಹ ಒಬ್ಬ ದಕ್ಷ, ಜನಾನುರಾಗಿ ಅಧಿಕಾರಿ ಸಿಕ್ಕರೆ ಜನರು ಯಾಕಿಷ್ಟು ಆರಾಧಿಸುತ್ತಾರೆ ಮತ್ತು ಮನೆಮಗನಂತೆ ಪ್ರೀತಿಸುತ್ತಾರೆಂಬುದನ್ನು ಒಂದು ಕ್ಷಣವಾದರೂ ಆಲೋಚನೆ ಮಾಡುತ್ತೀರಾ ಮುಖ್ಯಮಂತ್ರಿಗಳೇ? ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ… ಈ ಸಂದರ್ಭದಲ್ಲಿ ಬೇರಿನ್ನೇನನ್ನೂ ಬರೆಯುವ ಮನಸ್ಥಿತಿಯಲ್ಲಿ ನಾವಿಲ್ಲ್ಲ. ಇಲ್ಲಿ ನಾವು ಅಂದರೆ ಪತ್ರಕರ್ತ ಸಮುದಾಯದವರು. ದಕ್ಷ ಐಎಎಸ್ ಅಧಿಕಾರಿ ಎಂದೇ ಹೆಸರಾಗಿದ್ದ ಡಿ.ಕೆ ರವಿ ಅವರ ಅಕಾಲಿಕ ಸಾವು ಉಂಟುಮಾಡಿರುವ ನೋವಿನ ಪರಿಣಾಮವದು. ಬಹುಶಃ ಬೇರೆ ಪತ್ರಕರ್ತರ ಮನಸ್ಥಿತಿಯೂ […]
Read More