ಗಾಂಧೀಜಿ ಚಿಂತನೆಯಿಂದ ದೂರ, ಬಲುದೂರ. ದೇಶದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಮಹಾತ್ಮರ ಅಂತ್ಯೋದಯ ಪರಿಕಲ್ಪನೆಯ ಆಶಯ

– ಹರಿಪ್ರಕಾಶ್‌ ಕೋಣೆಮನೆಭಾರತದ ಸುದೀರ್ಘ ಇತಿಹಾಸದತ್ತ ಕಣ್ಣಾಡಿಸಿದರೆ ಅಲ್ಲಿ ದಾಳಿಕೋರರು ಇಲ್ಲವೇ ಆಕ್ರಮಣಕಾರಿಗಳ ಅಧ್ಯಾಯವೇ ಹೆಚ್ಚು. ದಾಳಿಕೋರರು ನಮ್ಮ ದೇಶದ ಮೇಲೆ ಎರಗಿ ಬಂದಾಗಲೆಲ್ಲಾ, ಸಮಾಜದಲ್ಲಿನ ಕೆಲವು ಗುಂಪುಗಳು ಪ್ರತಿರೋಧ ವ್ಯಕ್ತಪಡಿಸಿವೆ. ಒಂದಿಷ್ಟು ರಾಜರು ಅವರ ವಿರುದ್ಧ ಯುದ್ಧ ನಡೆಸಿ, ಹಿಮ್ಮೆಟ್ಟಿಸಿದ್ದಾರೆ. ಒಟ್ಟಾರೆ 1857ರಲ್ಲಿ ನಿರ್ದಿಷ್ಟವಾಗಿ ರೂಪುಗೊಂಡ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ ಶ್ರೀಸಾಮಾನ್ಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಉದಾಹರಣೆಗಳು ಕಡಿಮೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂಬ ಪ್ರಯತ್ನಗಳು ಅಲ್ಲಲ್ಲಿ ನಡೆದಿದ್ದವಾದರೂ ನಿರೀಕ್ಷಿತ […]

Read More

ಕನ್ನಡಕ್ಕೆ ನಿಜವಾದ ಅಪಾಯ ಹಿಂದಿಯಿಂದ ಅಲ್ಲ, ಇಂಗ್ಲಿಷ್‌ನಿಂದ

ಭಾಷೆಯ ಜೊತೆಗೆ ಉದ್ಯೋಗದ ಪ್ರಶ್ನೆ, ರಾಜಕೀಯ ಸೇರಿಕೊಂಡು ಸನ್ನಿವೇಶವನ್ನು ಜಟಿಲಗೊಳಿಸಿದೆ. ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಲ್ಲ. ಅದು ನಮ್ಮತನ, ನಮ್ಮ ಸಂಸ್ಕೃತಿ, ನಮ್ಮ ಜಾಯಮಾನ- ಎಲ್ಲವೂ ಹೌದು. ಹಾಗಾಗಿಯೇ, ಭಾಷೆಗೆ ಎಲ್ಲೋ ಏನೋ ಧಕ್ಕೆಯಾಗುತ್ತಿದೆ, ಅಪಾಯ ಕಾದಿದೆ ಎಂಬ ಆತಂಕ ಎದುರಾದಾಗಲೆಲ್ಲಾ, ಭಾವೋದ್ವೇಗ ಕೆರಳಿ ಒಮ್ಮೊಮ್ಮೆ ಅನಾಹುತಗಳು ಸಂಭವಿಸಿವೆ. ಅಂತೆಯೇ ಹಿಂದಿ ದಿವಸ್‌ ಆಚರಣೆ ಹಿನ್ನೆಲೆಯಲ್ಲಿ ಹಿಂದಿ ಹಾಗೂ ಹಿಂದಿಯೇತರ ಭಾಷೆಯ ಕುರಿತ ಚರ್ಚೆ, ವಾದ-ವಿವಾದ-ವಾಗ್ವಾದ ಮತ್ತೆ ಮುನ್ನೆಲೆಗೆ ಬಂದಿರುವ ಹೊತ್ತಲ್ಲಿ, ಇದರ ಇತಿಹಾಸ, ವರ್ತಮಾನ, […]

Read More

ಶಿಕ್ಷಣ ನೀತಿ ಎಂಬುದು ಬೋರ್ಡ್‌ ಬದಲಿಸಿದಷ್ಟು ಸರಾಗವೇ?

ಮೂರ್ನಾಲ್ಕು ದಶಕಗಳ ನಂತರ ಸಿಕ್ಕ ಅವಕಾಶವನ್ನು ಆತುರಕ್ಕೆ ಬಿದ್ದು ಕೈಚೆಲ್ಲುವುದು ಸರಿಯಲ್ಲ ಪ್ರತಿ ಮನುಷ್ಯನಲ್ಲಿರುವ ಚೈತನ್ಯವನ್ನು ಅಭಿವ್ಯಕ್ತಗೊಳಿಸುವುದೇ ಶಿಕ್ಷಣದ ಗುರಿ ಎಂದವರು ಸ್ವಾಮಿ ವಿವೇಕಾನಂದ. ಸಮಾಜದಲ್ಲಿ ಸಮಾನತೆ ಮೂಡಬೇಕೆಂದರೆ ಎಲ್ಲರೂ ಶಿಕ್ಷಿತರಾಗುವುದು ಅತ್ಯವಶ್ಯಕ ಎಂದು ಹೇಳಿದವರು ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌. ಶಿಕ್ಷಣ ಎಂದರೆ ಅಕಾಡೆಮಿಕ್‌ ಹಾಗೂ ವೃತ್ತಿಪರ ಅವಶ್ಯಕತೆಗಳನ್ನೂ ಮೀರಿ ಜ್ಞಾನ ಸಂಪಾದಿಸುವುದಾಗಿದ್ದು, ಪುಸ್ತಕಕ್ಕೆ ಸೀಮಿತವಾಗಿ ಕಂಠಪಾಠ ಮಾಡಿಸುವುದರಿಂದ ಜೀವನಕ್ಕೆ ಯಾವುದೇ ಸಹಕಾರಿಯಾಗುವುದಿಲ್ಲ ಎಂಬುದು ದೇಶದ ಎರಡನೇ ರಾಷ್ಟ್ರಪತಿ, ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್‌ ಹೇಳಿದ ಮಾತು! […]

Read More

ಭಾರತ ತನ್ನ ಕ್ಷಾತ್ರ ಗುಣ ತೋರಲು ಇದು ಸಕಾಲ!

ಪಾಕಿಸ್ತಾನದ ದುಷ್ಟರಿಗೆ ಶಿಕ್ಷೆ, ಅಫಘಾನಿಸ್ತಾನದ ಶಿಷ್ಟರಿಗೆ ರಕ್ಷೆ ನಮ್ಮಿಂದ ಆಗಬೇಕು ಅಫ್ಘಾನಿಸ್ತಾನ ನೆಲದಿಂದ ಅಮೆರಿಕಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಾರಂಭಿಸಿದ ಬೆನ್ನಲ್ಲಿಯೇ, ತಾಲಿಬಾನಿಗಳು ಬಾಲ ಬಿಚ್ಚಲಾರಂಭಿಸಿದ್ದಾರೆ. ಅವರ ಭಯೋತ್ಪಾದನೆ, ಜನ ಹಿಂಸೆ ಶುರುವಾಗಿದೆ. ವಿಭಜನೆಗೆ ಮುನ್ನ ತನ್ನ ನೆರೆಯ ರಾಷ್ಟ್ರವೇ ಆಗಿದ್ದ ಅಫ್ಘಾನಿಸ್ತಾನದ ನೆಲದಲ್ಲಿ ಭಾರತ ನಿರ್ಮಿಸಿದ ಆಸ್ತಿಗಳ ಮೇಲೂ ದಾಳಿ ನಡೆದಿದೆ. ಆಫ್ಘನ್ ಭದ್ರತಾ ಪಡೆ ಹಾಗೂ ತಾಲಿಬಾನಿಗಳ ನಡುವಿನ ಹಿಂಸಾಚಾರ ಕಂಡು ಆತಂಕಗೊಂಡಿರುವ ನಮ್ಮ ಕೇಂದ್ರ ಸರಕಾರ, ಅಲ್ಲಿ ನೆಲೆಸಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ. […]

Read More

ಕೊನೆಯ ಓವರ್‌ನಲ್ಲಿ ಮ್ಯಾಚ್‌ ಗೆಲ್ಲಿಸಬೇಕಾಗಿರುವ ಬೊಮ್ಮಾಯಿ!

ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತೆ ಎಲ್ಲರನ್ನೂ ಒಳಗೊಳ್ಳುವ ಆಡಳಿತ ನಡೆಸಬೇಕಾಗಿದೆ. ಕರ್ನಾಟಕದಲ್ಲಿ ಆಗಿಹೋಗಿರುವ ಮುಖ್ಯಮಂತ್ರಿಗಳ ಪಟ್ಟಿಯನ್ನು ಒಮ್ಮೆ ಗಮನಿಸಿ ನೋಡಿ. ಅವರು ಆಯ್ಕೆಯಾದ ಬಗೆ, ಸ್ವಭಾವ, ಸಾಮಾಜಿಕ ಹಿನ್ನೆಲೆ, ಜನಪ್ರಿಯತೆ, ಜನಪರತೆ, ಪ್ರತಿನಿಧಿಸಿದ ಪಕ್ಷ , ಕೌಟುಂಬಿಕ ಹಿನ್ನೆಲೆ, ಅವರಿಗೆ ಒಲಿದ ಅದೃಷ್ಟ, ಮಾಡಿ ಹೋಗಿರುವ ಕೆಲಸಗಳು- ಎಲ್ಲವನ್ನೂ ನೋಡಿದಾಗ ಮುಖ್ಯಮಂತ್ರಿಗಳ ಇತಿಹಾಸವೇ ಒಂದು ರೀತಿಯಲ್ಲಿ ರಣರೋಚಕ ಎನಿಸಿಬಿಡುತ್ತದೆ. ಬಹುಸಂಖ್ಯಾತ ಸಮುದಾಯದವರು ಮಾತ್ರವಲ್ಲ, ಯಾರೂ ಊಹಿಸಲು ಸಾಧ್ಯವೇ ಆಗದಂಥ ಅಲ್ಪಸಂಖ್ಯಾತ ಸಮುದಾಯದವರು ಇಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಹೈಕಮಾಂಡ್‌ […]

Read More

ತಾನೂ ಸಾಂವಿಧಾನಿಕ ಅಂಗ ಎಂಬುದ ಮರೆಯಿತೇ ಕಾರ್ಯಾಂಗ?

ಪ್ರಜಾಸತ್ತಾತ್ಮಕವಾಗಿ ರೂಪಿಸಿಕೊಂಡ ಸಂಸದೀಯ ಆಡಳಿತ ವ್ಯವಸ್ಥೆಯೇ ಭಾರತದ ಬಲ-ಬ್ಯೂಟಿ ಶಾಸನ ರೂಪಿಸುವ ಅಧಿಕಾರವನ್ನು ಶಾಸಕಾಂಗಕ್ಕೂ, ಈ ಶಾಸನ-ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಕಾರ್ಯಾಂಗಕ್ಕೂ, ಈ ಕಾನೂನುಗಳನ್ನು ಉಲ್ಲಂಘಿಸಿದರೆ ಶಿಕ್ಷೆ ನೀಡುವ ಅಧಿಕಾರವನ್ನು ನ್ಯಾಯಾಂಗಕ್ಕೂ ನೀಡಿರುವ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಎಲ್ಲವೂ ಸರಿಯಾಗಿದ್ದರೆ ನೋಡಲು, ಕೇಳಲು, ಅನುಭವಿಸಲು ಬಲು ಸೊಗಸು. ರಾಜಾಡಳಿತವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಾಗ, ಅದಕ್ಕೆ ಸಂವಿಧಾನವೇ ಪರಮೋಚ್ಛ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಸಾರಿದರು. ಇಂಥ ಸಂವಿಧಾನ ಎನ್ನುವುದು ಅಂಬೇಡ್ಕರ್‌ ಅವರೇ ಹೇಳಿದಂತೆ ಅಕ್ಷ ರ ಹಾಗೂ ಉದ್ದಿಶ್ಯ(ಲೆಟರ್‌ […]

Read More

ಭಾರತೀಯ ಆಡಳಿತ ಸೇವೆ (ಐಎಎಸ್) ‘ಸ್ವತಂತ್ರ’ವಾಗುವುದು ಯಾವಾಗ?

-ಆಲೋಚನೆ ಮಾಡಿದರೆ ಆಡಳಿತ ಸುಧಾರಣೆಯ ಓನಾಮ ಇಲ್ಲಿಂದಲೇ ಆಗುತ್ತದೆ “ನಾನು ಒಂದು ದಿನ ಐಎಎಸ್ ಆಗಬೇಕು”. ಇದು ಲಕ್ಷಾಂತರ ಪ್ರತಿಭಾನ್ವಿತ ಯುವ ಭಾರತೀಯರ ಕನಸು. ಶಾಲೆಯಲ್ಲಿದ್ದಾಗ ಶಿಕ್ಷಕರು ನಮ್ಮನ್ನು ಎದ್ದು ನಿಲ್ಲಿಸಿ ಮುಂದೆ ಏನಾಗಬೇಕು ಎಂದುಕೊಂಡಿದ್ದೀಯ ಎಂದು ಕೇಳಿದರೆ “”ಡಿಸಿ ಆಗಬೇಕು” ಎಂದು ಹೇಳಿದವರೆಷ್ಟೋ. ಲಕ್ಷಾಂತರ ಜನರಂತೆಯೇ ನನಗೂ ಕಾಲೇಜು ದಿನಗಳಲ್ಲಿ ಐಎಎಸ್ ಬಗ್ಗೆ ಸೆಳೆತ ಇದ್ದದ್ದು ನಿಜ. ಐಎಎಸ್ ಹುದ್ದೆ ಕುರಿತು ಯಾಕಿಷ್ಟು ಆಕರ್ಷಣೆ ಎಂಬುದರ ಕುರಿತು ಅನೇಕ ಬಾರಿ ಪ್ರಶ್ನೆಗಳೆದ್ದಿವೆ. ಇದಕ್ಕೆ ಅನೇಕ ಕಾರಣಗಳಿರಬಹುದು. […]

Read More

ಹೇಳಿದಂತೆ ಮಾಡು” ಎನ್ನುವುದು ಶಾಸಕಾಂಗದ ಮಾರ್ಗವಲ್ಲ

ಅತ್ಯಂತ ಸನ್ನಡತೆಯ,ಸೌಮ್ಯ ಸ್ವಭಾವದ,ಶುದ್ಧರಾದ ಪ್ರಧಾನಿ ಎಂದೇ ಕರೆಯಲಾಗುತ್ತಿದ್ದ ಡಾ. ಮನಮೋಹನ್ ಸಿಂಗರ ಕಾಲದ ಘಟನೆ ಇದು. ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರದ ಅವಧಿಯಲ್ಲಿ ಕಲ್ಲಿದ್ದಲು ಗಣಿ ಹಂಚಿಕೆ ವಿಚಾರ ವಿವಾದಕ್ಕೆ ಈಡಾಯಿತು. ಆ ವೇಳೆ ಕಲ್ಲಿದ್ದಲು ಖಾತೆಯನ್ನು ಸ್ವತಃ ಪ್ರಧಾನಿ ಅವರೇ ಹೊಂದಿದ್ದರು. ಗಣಿ ಹಂಚಿಕೆಯ ವಿವಿಧ ಹಂತಗಳಲ್ಲಿ ಪ್ರಧಾನಿ ಅಥವಾ ಪ್ರಧಾನಿ ಕಚೇರಿಯೂ ಭಾಗಿಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಯಾವಾಗ ಸಿಬಿಐ ಕೈಗೆತ್ತಿಕೊಂಡಿತೊ, ಆಗ ಸಿಬಿಐ ಎದುರು ವಿಚಾರಣೆಗೆ ಖುದ್ದು ಪ್ರಧಾನಿಯೇ ಹಾಜರಾದರು. ಒಡಿಶಾದ ಕಲ್ಲಿದ್ದಲು […]

Read More

ಕಪ್ಪು ಬಿಳುಪಿನಾಚೆಯ ಜಗತ್ತು ನೋಡದ ಜಾಲತಾಣ

ಮಾಹಿತಿ ತಂತ್ರಜ್ಞಾನದ ಬಹುದೊಡ್ಡ ಕೊಡುಗೆಯೇ ಆದ ಸಾಮಾಜಿಕ ಜಾಲತಾಣ ಸೃಷ್ಟಿಯಾಗುವವರೆಗೂ ಅನಿಸಿದ್ದನ್ನು ಹೇಳಲು, ದಾಖಲಿಸಲು, ಅಭಿವ್ಯಕ್ತಿಸಲು ಎಲ್ಲರಿಗೂ ಅವಕಾಶವೇ ಇರಲಿಲ್ಲ. ಅಭಿಪ್ರಾಯ ರೂಪಿಸುವವರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಪತ್ರಕರ್ತರು. ಸಾಹಿತಿಗಳು, ವಿಚಾರವಾದಿಗಳು, ವಕೀಲರು,ರಾಜಕಾರಣಿಗಳು- ಹೀಗೆ ಸಮಾಜದ ಒಂದಿಷ್ಟು ಮಂದಿ ಮಾತ್ರಯೇ ಆಗಿದ್ದರು. ಅವರು ಹೇಳಿದ ಅಭಿಪ್ರಾಯ-ಅನಿಸಿಕೆಗಳಿಗೆ ಮಾತ್ರ ಸಮೂಹ ಮಾಧ್ಯಮಗಳಲ್ಲಿ ಅವಕಾಶವಿತ್ತು. ಉಳಿದ ಶ್ರೀಸಾಮಾನ್ಯರು ತಮಗನಿಸಿದ್ದನ್ನು ತಮ್ಮದೇ ಆದ ಸೀಮಿತ ಖಾಸಗಿ ವಲಯದಲ್ಲಿ ಅಂದುಕೊಂಡು ಸುಮ್ಮನಿರಬೇಕಿತ್ತು. ಸಾರ್ವಜನಿಕ ವೇದಿಕೆ ಸಿಗುತ್ತಿರಲಿಲ್ಲ. ಆದರೆ, ಎಲ್ಲರೂ ತಮಗನಿಸಿದ್ದನ್ನು ಅಭಿವ್ಯಕ್ತಿ ಪಡಿಸಬಹುದು ಎಂಬುದನ್ನು […]

Read More

ಬಿತ್ತಿದಂತೆಯೇ ವೃಕ್ಷ ಎಂಬುದು ರಾಜಕೀಯಕ್ಕೂ ಅನ್ವಯ

ಸಾಮಾಜಿಕ ಬದಲಾವಣೆಗಾಗಿ ಹೋರಾಟ ಮಾಡುವ ರೀತಿ ಹೇಗೆಂದು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಕಲಿತರು. ಅದು ಅವರ ಪಾಲಿಗೆ ಒಂದು ರೀತಿಯಲ್ಲಿ ಪ್ರಯೋಗಶಾಲೆಯಂತಿತ್ತು. ಅಲ್ಲಿಂದ ಭಾರತಕ್ಕೆ ಬಂದಾಗ, ದಕ್ಷಿಣ ಆಫ್ರಿಕಾದಲ್ಲಿ ಕಲಿತ ಅನುಭವವನ್ನು ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸುವುದೊಂದೇ ಬಾಕಿ ಉಳಿದಿತ್ತು. ಅದಕ್ಕಾಗಿ ವಿವಿಧ ಸಂಘಟನೆ, ಸಂಸ್ಥೆಗಳಲ್ಲಿ ಸಂಚರಿಸಿದ ಗಾಂಧೀಜಿ, ಕೊನೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ತಮ್ಮ ಹುಡುಕಾಟ ಕೊನೆಗೊಳಿಸಿದರು. ಏಕೆಂದರೆ ರಾಜಕೀಯ ಎಂದರೆ ತಕ್ಷಣಕ್ಕೆ ಬೇಕಾದ ಅಧಿಕಾರದ ಪ್ರಾಪ್ತಿ ಎಂಬುದನ್ನು ಗಾಂಧೀಜಿ ಸುತಾರಾಂ ಒಪ್ಪುತ್ತಿರಲಿಲ್ಲ. ಅವರ ಅಭಿಪ್ರಾಯದಲ್ಲಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top