– ಸರಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್ – 1,000 ಆಂಗ್ಲಮಾದ್ಯಮ ಶಾಲೆಗಳನ್ನು ತೆರೆಯುವ ತಪ್ಪನ್ನು ತಿದ್ದಿಕೊಳ್ಳುತ್ತ ಕರ್ನಾಟಕ ಸರಕಾರ? ಎಲ್ಲ ಶಾಲೆಗಳನ್ನೂ ಇಂಗ್ಲಿಷ್ ಮೀಡಿಯಂ ಆಗಿ ಪರಿವರ್ತಿಸುವ ಆಂಧ್ರ ಸರಕಾರದ ಎರಡು ಆದೇಶಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಇದು ವೈಎಸ್ಆರ್ ಕಾಂಗ್ರೆಸ್ನ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರಕಾರದ ಪಾಲಿಗೆ ದೊಡ್ಡ ಹಿನ್ನಡೆ. ಆಂಧ್ರ ಹೈಕೋರ್ಟ್ನ ವಿಭಾಗೀಯ ಪೀಠದ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ, ನಿನಾಲಾ ಜಯಸೂರ್ಯ ಅವರು ಮಹತ್ವದ ತೀರ್ಪನ್ನು ನೀಡಿದ್ದಾರೆ. ಎಲ್ಲ ತೆಲುಗು ಮಾಧ್ಯಮದ ಶಾಲೆಗಳನ್ನೂ ಆಂಗ್ಲ ಮಾಧ್ಯಮದ ಶಾಲೆಗಳಾಗಿ ರೂಪಿಸಲು ಸರಕಾರ ಮುಂದಾಗಿದ್ದು, ಇದನ್ನು […]
Read More
ಮನೆಯಿಂದ ಕೆಲಸ ಮಾಡುವುದು, ವರ್ಕಿಂಗ್ ಫ್ರಮ್ ಹೋಮ್, ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸ ವಿಷಯವೇನೂ ಅಲ್ಲ. ವಾರಕ್ಕೊಂದು ದಿನವೋ ತಿಂಗಳಿಗೆರಡು ದಿನವೋ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಅನೇಕ ಸಂಸ್ಥೆಗಳು ಬಹಳ ವರ್ಷಗಳಿಂದಲೇ ತಮ್ಮ ಉದ್ಯೋಗಿಗಳಿಗೆ ನೀಡುತ್ತ ಬಂದಿವೆ. ಆಫೀಸಿಗೆ ಹೋಗುವ ಅಗತ್ಯವೇ ಇಲ್ಲದೆ, ಸದಾಕಾಲವೂ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸಿರುವ ಸಂಸ್ಥೆಗಳೂ ಇವೆ. ಈ ರೀತಿ ಕೆಲವರಿಗಷ್ಟೇ ಸೀಮಿತವಾಗಿದ್ದ ಸೌಲಭ್ಯವನ್ನು ಎಲ್ಲರಿಗೂ ವಿಸ್ತರಿಸಿದ್ದು, ಐಚ್ಛಿಕವಾಗಿದ್ದುದನ್ನು ಕಡ್ಡಾಯವಾಗಿಸಿದ್ದು ಕೋವಿಡ್-19ರ ಹೆಚ್ಚುಗಾರಿಕೆ. ಕಣ್ಣಿಗೆ […]
Read More
ರವಿ ಕಾಣದ್ದನ್ನು ಕವಿ ಕಾಣುತ್ತಾನೆ! ತನ್ನ ಕಲ್ಪನಾಶಕ್ತಿಯಿಂದ. ಹಾಗೆಯೇ ಕವಿ ಕಾಣದ್ದನ್ನು ನಮ್ಮ ದೇಶದ ನವೋದ್ಯಮಿಗಳು ಕಂಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಅವರು ಹುಟ್ಟಿಹಾಕಿರುವ ಸಾವಿರಾರು ಉದ್ಯಮಗಳು ಈ ಕೊರೊನಾ ಕಾಲದಲ್ಲಿ ನಮ್ಮನ್ನು ಕಾಯುತ್ತಿವೆ. ಕವಿಗೆ ಕಲ್ಪನೆ ಹೇಗೋ, ನವೋದ್ಯಮಿ / ಆಂತ್ರಪ್ರನರ್ಗೆ ‘ವಿಷನ್’ ಅಂದರೆ ಹಾಗೆ! ಸಣ್ಣ ಕಿಚ್ಚಿನ ಕಿಡಿಯಿಂದ ಆರಂಭಗೊಂಡು ಇಂದು ಬೃಹತ್ ಉದ್ಯಮಗಳಾಗಿ ಬೆಳೆದಿರುವ ಅದೆಷ್ಟೋ ನವೋದ್ಯಮಗಳೊಂದಿಗೆ ಅವುಗಳ ಆರಂಭಾವಸ್ಥೆಯಿಂದಲೇ ಸಲಹೆಗಾರನಾಗಿ ಕೆಲಸ ಮಾಡುವ ಸೌಭಾಗ್ಯ ನನಗೂ ನನ್ನ ಸಂವಹನ ಸಲಹಾ ಸಂಸ್ಥೆಗೂ […]
Read More
ರಾಜ್ಯಕಾರಣ : ಬಿಎಸ್ವೈ ಎದುರು ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಸವಾಲು – ಶಶಿಧರ ಹೆಗಡೆ. ರಾಮರಾಜ್ಯ ನಿರ್ಮಾಣವೆನ್ನುವುದು ಸುಂದರ ಕನಸು. ವಾಸ್ತವದಲ್ಲಿ ರಾಮರಾಜ್ಯ ಕಟ್ಟಿ ನಿಲ್ಲಿಸುವುದು ಸುಲಭ ಸಾಧ್ಯವಲ್ಲ. ಆದರೆ, ಅಧಿಕಾರದ ಗದ್ದುಗೆಯೇರಿದವರಿಗೆ ದೂರದರ್ಶಿತ್ವ ಅವಶ್ಯಕ. ರಾಮನಂತೆ ರಾಜ್ಯವಾಳಲು ಆಗದಿದ್ದರೂ ತುಘಲಕ್ ದರ್ಬಾರು ಸಲ್ಲ ಎಂಬ ವಿವೇಕ ಜಾಗೃತವಾಗಿರಬೇಕು. ಯಾಕೆಂದರೆ ಶ್ರೀರಾಮ ಯಾವತ್ತಿಗೂ ರಾಜಾರಾಮ ಎನಿಸಿಕೊಂಡಿದ್ದ. ಪ್ರಜಾರಂಜಕನೂ ಆಗಿದ್ದ ರಾಮ ಭಾರತೀಯ ಪರಂಪರೆಯಲ್ಲಿ ಆದರ್ಶಪ್ರಾಯ ವ್ಯಕ್ತಿ. ನಮ್ಮ ಮುಂದಿರುವ ಉತ್ಕೃಷ್ಟ ಪ್ರತಿಮೆ ರಾಮನಾದರೆ ಲಂಗುಲಗಾಮಿಲ್ಲದ ನಿರ್ಧಾರ ಕೈಗೊಂಡು ಪ್ರಜಾಪೀಡಕನೆನಿಸಿದ್ದವನು […]
Read More
ಬಾವಲಿಗಳಿಂದ ಕೋವಿಡ್-19 ಬರಲ್ಲ ಐಸಿಎಂಆರ್, ವಿಜ್ಞಾನಿಗಳ ಅಭಿಪ್ರಾಯ | ಮರಗಳನ್ನು ಕಡಿಯದಿರಲು ಮನವಿ ವಿಕ ಸುದ್ದಿಲೋಕ ಬೆಂಗಳೂರು : ಬಾವಲಿಗಳಿಂದ ಕೊರೊನಾ ವೈರಸ್(ಕೋವಿಡ್-19)ಗೆ ಹರಡುತ್ತಿದೆ ಎಂಬ ತಪ್ಪು ಮಾಹಿತಿಯನ್ನು ನಂಬಿದ ಅನೇಕರು ತಮ್ಮ ಮನೆ ಮಂದೆ ಇರುವ ಗಿಡ, ಮರಗಳ ಕೊಂಬೆಗಳನ್ನು ಕಡಿಯತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಮತ್ತು ತಜ್ಞರು ಬಾವಲಿಗಳು ಕೋವಿಡ್-19 ವಾಹಕಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡು ಪ್ರದೇಶ ವ್ಯಾಪ್ತಿಯ […]
Read More
ದೇಶದ 30% ಸೋಂಕಿಗೆ ತಬ್ಲಿಘಿ ಸಮಾವೇಶ ಲಿಂಕ್ – ದೇಶಾದ್ಯಂತ ಪತ್ತೆಯಾದ ಒಟ್ಟು ಕೊರೊನಾ ಪ್ರಕರಣಗಳು 14,378 – ತಬ್ಲಿಘಿ ಜಮಾತ್ ಸಮಾವೇಶದ ನಂಟಿರುವ ಸೋಂಕಿತರು 4,291 – ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಧಿಕೃತ ಮಾಹಿತಿ ಏಜೆನ್ಸೀಸ್ ಹೊಸದಿಲ್ಲಿ ದೇಶದಲ್ಲಿ ದಾಖಲಾದ ಕೊರೊನಾ ಸೋಂಕು ಪ್ರಕರಣಗಳಲ್ಲಿ ಶೇಕಡಾ 30ಕ್ಕೆ ತಬ್ಲಿಕ್ ಜಮಾತ್ ಸಮಾವೇಶದ ನಂಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ‘‘ದೇಶಾದ್ಯಂತ ಶನಿವಾರ ಮಧ್ಯಾಹ್ನದವರೆಗಿನ ವರದಿ ಪ್ರಕಾರ ಒಟ್ಟು 14,378 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, […]
Read More
ವಿಕ ಸುದ್ದಿಲೋಕ ಬೆಂಗಳೂರು: ಹಲವು ಕಡೆಗಳಲ್ಲಿ ಅವರ ಮೇಲೆ ಹಲ್ಲೆನಡೆಯಿತು, ಕೆಲವೆಡೆ ಅವರ ಕಡತಗಳನ್ನು ಕಿತ್ತೆಸೆದರು, ಬಾಯಿಗೆ ಬಂದಂತೆ ನಿಂದಿಸಿದರು.. ಆದರೂ ಅವರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯಲಿಲ್ಲ. ಮೂಲಸೌಕರ್ಯಗಳಿಲ್ಲ, ರೋಗಗಳ ಆತಂಕ ತುಂಬಿರುವ ಜಾಗಗಳಲ್ಲಿ ಅವರು ಒಬ್ಬಂಟಿಯಾಗಿ ಸಂಚರಿಸಬೇಕು.. ಅಷ್ಟಾದರೂ ಅವರು ಎದೆಗುಂದಲಿಲ್ಲ. ಸಕಾಲದಲ್ಲಿ ವೇತನ ನೀಡಲಿಲ್ಲವೆಂದು ಬೀದಿಗಿಳಿದು ಪ್ರತಿಭಟಿಸಿದ್ದರು. ಆದರೆ, ಸಂಕಷ್ಟದ ಈ ಕಾಲದಲ್ಲಿ ಅದನ್ನೇ ಬಳಸಿ ಬ್ಲ್ಯಾಕ್ಮೇಲ್ ಮಾಡಲಿಲ್ಲ. – ಇದು ಕೊರೊನಾ ವಿರುದ್ಧ ಸಮರದಲ್ಲಿ ನೈಜ ಸೇನಾನಿಗಳಾಗಿ ಊರೂರುಗಳಲ್ಲಿ ಕಾರ್ಯಾಚರಿಸುತ್ತಿರುವ ಆಶಾ […]
Read More
ಲಾಕ್ಡೌನ್ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಒಟ್ಟು 1 ಲಕ್ಷ ಕೋಟಿ ರೂ.ಗಳ ನಾನಾ ನೆರವಿನ ಪ್ಯಾಕೇಜ್ ಅನ್ನು ಶುಕ್ರವಾರ ಘೋಷಿಸಿದೆ. ಇದರ ಪರಿಣಾಮ ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹೆಚ್ಚಿನ ಸಾಲ ವಿತರಿಸಲು ಹಣಕಾಸು ಸಿಗಲಿದೆ. ರೈತರು, ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರಿಗೆ ಬ್ಯಾಂಕ್ ಸಾಲ ಸೌಲಭ್ಯ ಹೆಚ್ಚಲಿದೆ. ವಿಶೇಷ ಹಣಕಾಸು ಸಂಸ್ಥೆಗಳಿಗೂ ಹಣ ನೀಡಲಾಗಿದ್ದು, ಕಾಮಗಾರಿಗಳಿಗೆ ನೆರವಾಗಲಿದೆ. ಇದು ಶ್ಲಾಘನೀಯ ಕ್ರಮ. ಇಂಥದೊಂದು ನೆರವಿನ ನಿರೀಕ್ಷೆಯಲ್ಲಿ ದೇಶದ […]
Read More
ಲಾಕ್ಡೌನ್ನಿಂದ ಕಲಿತ ಪಾಠಗಳನ್ನು ಜೀವಮಾನ ಪರ್ಯಂತ ಅಳವಡಿಸಿಕೊಂಡರೆ ಅಪಾಯ ದೂರ. ಕೊರೊನಾ ಲಾಕ್ಡೌನ್ ಏಪ್ರಿಲ್ 14ಕ್ಕೆ ಅಂತ್ಯ ಕಾಣುವುದೇ ಅಥವಾ ಮುಂದುವರಿಯುವುದೇ ಎಂಬ ಒಂದು ಪ್ರಶ್ನೆ ಭಾರತದ ಕೋಟಿ ಕೋಟಿ ಜನರನ್ನು ಮೂರು ದಿನಗಳ ಹಿಂದಿನವರೆಗೂ ಕಾಡುತ್ತಿತ್ತು. ಅದನ್ನು ಎಲ್ಲರೂ ತಮ್ಮೊಳಗೆ ತಾವು ಕೇಳಿಕೊಳ್ಳುತ್ತಿದ್ದರು. ಆದರೆ, ಈಗ ಲಾಕ್ಡೌನ್ ಮೇ 3ರವರೆಗೆ ಅಧಿಕೃತವಾಗಿ ವಿಸ್ತರಣೆಯಾಗಿರುವುದರಿಂದ 14ರ ಕುತೂಹಲಕ್ಕೆ ತೆರೆ ಬಿದ್ದಾಗಿದೆ. ಬೆನ್ನಲ್ಲಿಯೇ ಏಪ್ರಿಲ್ 20ರ ಬಳಿಕ ಈಗ ಜಾರಿಯಲ್ಲಿರುವ ಲಾಕ್ಡೌನ್-2ರ ಬಿಗಿ ಏನಾದರೂ ಸಡಿಲ ಆಗುವುದೇ? ಮೇ […]
Read More
ಹೊಸದಿಲ್ಲಿ: ಚೀನಾದಲ್ಲಿ ಸರ್ವರ್ ಹೊಂದಿರುವ ಟೆಲಿ ಕಾನರೆನ್ಸಿಂಗ್ ಆ್ಯಪ್ ‘ಜೂಮ್’ ಬಳಕೆ ನಿಷೇಸಿ ಟೆಕ್ ದಿಗ್ಗಜ ‘ಗೂಗಲ್’ ತನ್ನ ಸಿಬ್ಬಂದಿಗೆ ಸೂಚನೆ ರವಾನಿಸಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವಾಲಯವೂ ಅದಕ್ಕೆ ಕಡಿವಾಣ ಹಾಕಲು ನಿರ್ದೇಶನಗಳನ್ನು ಹೊರಡಿಸಿದೆ. ‘ಜೂಮ್’ ಸುರಕ್ಷಿತವಲ್ಲ ಹಾಗೂ ಮಾಹಿತಿಗಳು ಸೈಬರ್ ಖದೀಮರ ಪಾಲಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ‘ವರ್ಕ್ ಫ್ರಮ್ ಹೋಮ್’ನಲ್ಲಿ ನಿರತವಾಗಿರುವ ಮಂದಿ, ತಮ್ಮ ಕಚೇರಿ ಮುಖ್ಯಸ್ಥರು ಹಾಗೂ ಸಹೋದ್ಯೋಗಿಗಳ ಜತೆ ಸಂವಾದ ನಡೆಸಲು ‘ಜೂಮ್’ […]
Read More