ಸಣ್ಣ ಮತ್ತು ಮಧ್ಯಮ ಉದ್ದಿಮೆ ಎನಿಸಿಕೊಳ್ಳಲು ಹೂಡಿಕೆ ಮತ್ತು ವಹಿವಾಟು ಅರ್ಹತೆಯ ಮಿತಿಯನ್ನು ಗಮನಾರ್ಹವಾಗಿ ವಿಸ್ತರಿಸುವ ಮೂಲಕ ‘ಆತ್ಮನಿರ್ಭರ ಭಾರತ್ ಪ್ಯಾಕೇಜ್’ನಲ್ಲಿ ಇಂಡಸ್ಟ್ರಿಯ ಭವಿಷ್ಯದ ವಿಕಾಸಕ್ಕೆ ಉತ್ತೇಜನ ನೀಡಲಾಗಿದೆ. ಹೀಗಿದ್ದರೂ, ವರ್ತಮಾನದ ಕೊರೊನಾ ಬಿಕ್ಕಟ್ಟು ಎದುರಿಸಲು ನೇರ ನೆರವನ್ನೂ ಹೆಚ್ಚಿಸಬಹುದಿತ್ತು ಎನ್ನುತ್ತಾರೆ ತಜ್ಞರು. – ಶೇ.30.54 ಜಿಡಿಪಿಯಲ್ಲಿ ಎಂಎಸ್ಎಂಇ ಪಾಲು – 11 ಕೋಟಿ ಎಂಎಸ್ಎಂಇ ವಲಯ ಸೃಷ್ಟಿಸಿರುವ ಉದ್ಯೋಗ (ಆತ್ಮ ನಿರ್ಭರ್ ಭಾರತ್- ಭಾಗ 2) ‘ಸಣ್ಣದಾಗಿರುವುದು ಚೆಂದ’ ನುಡಿಗಟ್ಟು ಸಣ್ಣ ಉದ್ದಿಮೆಗಳ ಬೆಳವಣಿಗೆಯ ದೃಷ್ಟಿಯಿಂದ […]
Read More
– ಚೀನಾಗೆ ಮಣಿದರೆ ಅನುದಾನ ಬಂದ್ ಎಚ್ಚರಿಕೆ – 30 ದಿನಗಳ ಗಡುವು ನೀಡಿದ ಟ್ರಂಪ್. ವಾಷಿಂಗ್ಟನ್: ಕೊರೊನಾ ಸಂಕಷ್ಟದ ಆರಂಭದಿಂದಲೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ವಿರುದ್ಧ ಹರಿಹಾಯುತ್ತಿರುವ ಅಮೆರಿಕವು, ಡಬ್ಲ್ಯುಎಚ್ಒ ಚೀನಾ ಹಿಡಿತದಿಂದ ಹೊರಬರದಿದ್ದರೆ ತನ್ನ ಪಾಲಿನ ಅನುದಾನ ಶಾಶ್ವತವಾಗಿ ಸ್ಥಗಿತಗೊಳಿಸುವ ಎಚ್ಚರಿಕೆ ರವಾನಿಸಿದೆ. ಅಲ್ಲದೇ ಇದೇ ರೀತಿಯ ವರ್ತನೆ ತೋರಿದರೆ ಸದಸ್ಯತ್ವದಿಂದ ಹೊರಬರುವ ಸುಳಿವು ನೀಡಿದೆ. ಇದರೊಂದಿಗೆ ಅಮೆರಿಕ ಮತ್ತು ಚೀನಾ ನಡುವಿನ ಸಮರ ಇನ್ನಷ್ಟು ತೀವ್ರಗೊಂಡಿದೆ. ಪದೇಪದೆ ಕೊರೊನಾ ನಿಯಂತ್ರಣ ವಿಚಾರದಲ್ಲಿ […]
Read More
– ಅಕ್ಕಿ, ತರಕಾರಿ, ಹಾಲು ಇತ್ಯಾದಿ ಆಹಾರ ಉತ್ಪನ್ನಗಳಿಗಿಲ್ಲ ಬೇಡಿಕೆ. ಯಳನಾಡು ಮಂಜು, ದಾವಣಗೆರೆ. ಲಾಕ್ಡೌನ್ ಮುಗಿದ ನಂತರ ಬಹುತೇಕ ವಸ್ತುಗಳ ಬೆಲೆ ಗಗನ ಮುಖಿ ಆಗುತ್ತಿದೆ. ಸಿಮೆಂಟ್, ಕಬ್ಬಿಣ ಇತ್ಯಾದಿ ನಿರ್ಮಾಣ ಸಾಮಗ್ರಿಗಳಿಂದ ಹಿಡಿದು ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಮಗ್ರಿಗಳ ತನಕ ಪ್ರಮುಖ ಉತ್ಪನ್ನಗಳ ದರ ಜಂಪ್ ಆಗಿದೆ. ಆದರೆ ಆಹಾರ ಉತ್ಪನ್ನಗಳ ಬೆಲೆ ಮಾತ್ರ ಕುಸಿಯತ್ತಿದ್ದು, ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬಹುತೇಕ ಕೊರೊನಾ ನಿರ್ಬಂಧ ತೆರವಾದರೂ ಹೋಟೆಲ್ ಉದ್ಯಮಕ್ಕೆ […]
Read More
ಲಾಕ್ಡೌನ್ ಬಹುತೇಕ ತೆರವಾಗಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳಲು ಕಾತರಿಸುತ್ತಿದೆ. ಸಹಜ ಸ್ಥಿತಿಗೆ ಬರಬೇಕೆಂದರೆ ಬದುಕಲು ಅಗತ್ಯವಾದ ದಿನಸಿ ವಸ್ತುಗಳ ಬೆಲೆ ಸಹಜ ಸ್ವರೂಪಕ್ಕೆ ಬರಬೇಕು. ಹಾಗೆಯೇ ರೈತರ ಉತ್ಪನ್ನಗಳು ಲಾಭಕರ ಬೆಲೆಗೆ ಮಾರಾಟವಾಗಬೇಕು, ಅವರೂ ಕೂಡ ಅಗತ್ಯ ವಸ್ತುಗಳಿಗೆ ವೆಚ್ಚ ಮಾಡಲು ಸಾಧ್ಯವಾಗಬೇಕು. ಆದರೆ ಲಾಕ್ಡೌನ್ ತೆರವಾಗುತ್ತಿರುವಂತೆ ಮಾರುಕಟ್ಟೆಯಲ್ಲಿ ಕಾಣಿಸುತ್ತಿರುವ ಸ್ಥಿತಿ ಭಿನ್ನವಾಗಿದೆ. ಸಿಮೆಂಟ್, ಕಬ್ಬಿಣ ಇತ್ಯಾದಿ ನಿರ್ಮಾಣ ಸಾಮಗ್ರಿಗಳು, ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಮಗ್ರಿಗಳ ಬೆಲೆಗಳು ಹೆಚ್ಚಿವೆ. ಕಟ್ಟಡ ಸಾಮಗ್ರಿಗಳ ಬೆಲೆ ಬಹುತೇಕ ದುಪ್ಪಟ್ಟು […]
Read More
ಲಾಕ್ಡೌನ್ ನಿರ್ಬಂಧ ಹಿನ್ನೆಲೆಯಲ್ಲಿ ಬಾಗಿಲು ತೆರೆಯಲಾಗದ ಕಾಲೇಜುಗಳು ಆನ್ಲೈನ್ ಕ್ಲಾಸ್ ನಡೆಸುತ್ತಿವೆ. ವ್ಯಾಪಕ ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಇದಕ್ಕೊಂದು, ವಿಭಿನ್ನ ಪರಿಹಾರ ಕಂಡುಕೊಂಡಿದ್ದು, 20 ಅಡಿ ಎತ್ತರದ ಮರ ಏರಿ ಆನ್ಲೈನ್ ಕ್ಲಾಸಿಗೆ ಹಾಜರಾಗುತ್ತಿದ್ದಾನೆ! ಶಿರಸಿ ತಾಲೂಕು ಬಕ್ಕಳ ಗ್ರಾಮದ ಅಂಬಳಿಕೆ ಕಲ್ಲಗದ್ದೆ ಹಳ್ಳಿಯ ಶ್ರೀರಾಮ ಗೋಪಾಲ ಹೆಗಡೆ ಒಂದೂವರೆ ತಿಂಗಳಿಂದ ಮರ ಹತ್ತುವ ಮೂಲಕ ತನ್ನ ಸೆಲ್ಫೋನ್ಗೆ ಇಂಟರ್ನೆಟ್ […]
Read More
ಸಮರ್ಥ ಭಾರತವನ್ನು ಕಟ್ಟಬೇಕಾದರೆ ಅಂತಹ ಭಾರತದ ಚಿತ್ರ ಹೇಗಿರಬೇಕು ಎಂಬ ಕನಸನ್ನು ನಾವು ನಮ್ಮ ಮುಂದಿಟ್ಟುಕೊಳ್ಳಬೇಕು. ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀ (ಈ ಕುರಿತು ‘ಮೇರೇ ಸಪನೋಂ ಕಾ ಭಾರತ್’ ಎಂಬ ಅವರ ಪುಸ್ತಕವಿದೆ) ಸೇರಿದಂತೆ ಅನೇಕ ಮಹಾಪುರುಷರು ಬೇರೆಬೇರೆ ಸಂದರ್ಭಗಳಲ್ಲಿ ಭಾರತದ ಬಗೆಗಿನ ತಮ್ಮ ಚಿತ್ರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಸಮರ್ಥ ಭಾರತವೆಂದರೆ ಒಗ್ಗಟ್ಟಿನ ಏಕಾತ್ಮ ಭಾರತ. ಅನೇಕ ರಾಜ್ಯಗಳು, ಭಾಷೆಗಳು, ಮತ ಪಂಥ ಸಂಪ್ರದಾಯಗಳು, ಹೀಗೆ ವಿಭಿನ್ನ ರೀತಿಯಲ್ಲಿರುವ ವೈವಿಧ್ಯಮಯ ದೇಶ ಭಾರತ. ಇಲ್ಲಿಅನೇಕ […]
Read More
– ಚೀನಾದಿಂದ ಕಂಪನಿಗಳು ಬರಲು ಸೂಕ್ತ ವಾತಾವರಣ ಸೃಷ್ಟಿಸಬೇಕು. ಐದು ನಿರಂತರ ಪ್ರೆಸ್ಮೀಟ್ಗಳ ಮೂಲಕ ಜಗತ್ತಿನ ಮೂರನೇ ಅತಿ ದೊಡ್ಡ ಪ್ಯಾಕೇಜ್ ಘೋಷಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಬಗ್ಗೆ ಹೆಚ್ಚಿನ ವಿವರಗಳನ್ನು ವಿಜಯ ಕರ್ನಾಟಕದ ಸಹೋದರ ಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’ದ ರಾಜೀವ ದೇಶಪಾಂಡೆ, ಸಿದ್ಧಾರ್ಥ, ಸುರೋಜಿತ್ ಗುಪ್ತಾ ಜೊತೆಗೆ ನಡೆಸಿದ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. – ಪ್ಯಾಕೇಜ್ಗೆ ನೀವು ಪರಿಗಣಿಸಿದ ಅಂಶಗಳೇನು? – ಲಾಕ್ಡೌನ್ ಘೋಷಿಸಿದ ಗಳಿಗೆಯಿಂದಲೂ ಇದರ ಅವಶ್ಯಕತೆ ನಮ್ಮ ಗಮನದಲ್ಲಿತ್ತು. […]
Read More
ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ರಾಜ್ಯ ಸರಕಾರ ಉಳಿದೆಡೆ ಲಾಕ್ಡೌನ್ ಅನ್ನು ಬಹುತೇಕ ಸಡಿಲಿಸಿದೆ. ಸೋಂಕು ಹರಡುವಿಕೆಯ ಸರಪಣಿ ಮುರಿಯಲು ಭಾನುವಾರ ಸಂಪೂರ್ಣ ಲಾಕ್ಡೌನ್ ಮಾಡಲು ನಿರ್ಧರಿಸಿದ್ದು, ಮಾಲ್, ಸಿನಿಮಾ, ಹೋಟೆಲ್ಗಳ ತೆರೆಯುವಿಕೆಗೆ ನಿರ್ಬಂಧವಿದೆ. ರಾಜ್ಯದೊಳಗಿನ ರೈಲು ಸಂಚಾರವಿದ್ದರೂ ಮೆಟ್ರೋ ಓಡಾಡುವುದಿಲ್ಲ. ಅಂತಾರಾಜ್ಯ ಪ್ರಯಾಣ ಮುಕ್ತವಲ್ಲ. ಅಂತರ್ಜಿಲ್ಲಾ ಪ್ರಯಾಣ ಮಾಡಬಹುದು. ಹವಾನಿಯಂತ್ರಿತ ಬಸ್ಗಳ ಹೊರತಾಗಿ ರಾಜ್ಯ ಸಾರಿಗೆ ಸಂಸ್ಥೆಗಳ ಎಲ್ಲ ಬಸ್ ಸಂಚಾರ ಶುರುವಾಗಲಿದೆ. ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್ ಓಡಾಡಲಿವೆ. ಸೆಲೂನ್ ಸಹಿತ ಎಲ್ಲಾ […]
Read More
– 54 ದಿನಗಳ ಬಳಿಕ ಸಹಜ ಸ್ಥಿತಿಯತ್ತ ಜನಜೀವನ – ಸಾರಿಗೆ ಸೇರಿ ಬಹುತೇಕ ಎಲ್ಲಾ ಚಟುವಟಿಕೆಗಳಿಗೂ ಗ್ರೀನ್ ಸಿಗ್ನಲ್ – ಕಂಟೈನ್ಮೆಂಟ್ ಝೋನ್ಗಳಿಗೆ ಮಾತ್ರ ಲಾಕ್ಡೌನ್ ಸೀಮಿತ – ಸೋಂಕು ನಿಯಂತ್ರಣ ಜವಾಬ್ದಾರಿ ಇನ್ನು ಜನರ ಕೈಗೆ ವಿಕ ಸುದ್ದಿಲೋಕ ಬೆಂಗಳೂರು ರಾಜ್ಯದಲ್ಲಿ ಲಾಕ್ಡೌನ್ ಬಹುತೇಕ ತೆರವಾಗಿದ್ದು, ಮಂಗಳವಾರದಿಂದ ಸಾಮಾನ್ಯ ಜನಜೀವನ ಸಹಜ ಸ್ಥಿತಿಯತ್ತ ಮರಳಲಿದೆ. ಮಾಲ್, ಸಿನಿಮಾ, ಹೋಟೆಲ್, ಶಾಲಾ ಕಾಲೇಜು, ಮೆಟ್ರೊ, ಮುಕ್ತ ಅಂತಾ ರಾಜ್ಯ ಪ್ರಯಾಣ ಹೊರತುಪಡಿಸಿ ರಾಜ್ಯದೊಳಗಿನ ಬಹುತೇಕ ಎಲ್ಲ […]
Read More
ಲಾಕ್ಡೌನ್ ಕಾರಣದಿಂದ ನಿಂತುಹೋಗಿದ್ದ ಕಚೇರಿ ಮೀಟಿಂಗ್ಗಳು, ಸಾಂಸ್ಕೃತಿಕ ಚಟುವಟಿಕೆಗಳು ಆನ್ಲೈನ್ನಲ್ಲಿ ಚಿಗುರುತ್ತಿವೆ. ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ, ವಿಶ್ವವಿದ್ಯಾಲಯ ಸೆಮಿನಾರ್ಗಳು – ಎಲ್ಲವೂ ‘ವೆಬಿನಾರ್’ ಎಂಬ ಹೆಸರಿನ ವರ್ಚುವಲ್ ಒಟ್ಟು ಸೇರುವಿಕೆಯ ಮೂಲಕ ಘಟಿಸುತ್ತಿವೆ. ಭವಿಷ್ಯದಲ್ಲಿ ಅತಿ ಸಾಮಾನ್ಯ ಅನ್ನಿಸಬಹುದಾದ ಈ ಬೆಳವಣಿಗೆಯ ಬಗ್ಗೆ ಸಮಗ್ರ ನೋಟ ಇಲ್ಲಿದೆ. ಕಚೇರಿಗಳು ಮನೆಗಳಿಗೆ ಶಿಫ್ಟ್ ಆಗಿವೆ. ವರ್ಕ್ ಫ್ರಮ್ ಹೋಮ್ ಪದ್ಧತಿಯಿಂದಾಗಿ ಆಡಳಿತ ಮಂಡಳಿಗಳು, ಟೀಮ್ ಸದಸ್ಯರು ಸೇರುವುದು ಆನ್ಲೈನ್ನಲ್ಲಷ್ಟೇ ಸಾಧ್ಯವಾಗಿದೆ. ಕವಿಗೋಷ್ಠಿ, ವಿಚಾರಸಂಕಿರಣ, ಸಂವಾದ, ಪುಸ್ತಕ ಬಿಡುಗಡೆ, […]
Read More